ಕಾಂಗ್ರೆಸ್‌ ನಾಯಕರ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ

ಕಾಂಗ್ರೆಸ್‌ ನಾಯಕರ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ

ಮಂಡ್ಯ: ರಾಜ್ಯದೆಲ್ಲಾಡೆ ಲೋಕಸಭಾ ಚುನಾವಣೆಗೆ ಇನ್ನೇನು ಒಂದೇ ದಿನ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಅಭ್ಯರ್ಥಿಗಳು ನಿನ್ನೆ ಭರ್ಜರಿ ಪ್ರಚಾರ ಮಾಡಿದರು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ.

ನಿನ್ನೆ ಮಂಡ್ಯದಲ್ಲಿ ತಮ್ಮ ಪರ ಚುನಾವಣಾ ಪ್ರಚಾರ ಮಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಅವರ ಕೊಡುಗೆ ಏನು ಅಂತ ಕೇಳಿರುವ ಕಾಂಗ್ರೆಸ್ ನಾಯಕರಿಗೆ ಉತ್ತರ ನೀಡಿದ್ದಾರೆ.

2016-17 ರ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಂಡ್ಯದಲ್ಲಿ ರೈತರ ಸಾಲುಸಾಲು ಅತ್ಮಹತ್ಯೆ ಪ್ರಕರಣಗಳು ನಡೆದವು. ಮೃತ ರೈತರ ಕುಟುಂಬಗಳಿಗೆ ಯಾವೊಬ್ಬ ಕಾಂಗ್ರೆಸ್ ನಾಯಕನೂ ಸಾಂತ್ವನ ಹೇಳಲಿಲ್ಲ. ತಾನು ಆಧಿಕಾರದಲ್ಲಿರದಿದ್ದರೂ ರೈತರ ಮನೆಗಳಿಗೆ ಹೋಗಿ ಕೈಲಾದಷ್ಟು ಧನ ಸಹಾಯ ಮಾಡಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.

2018 ರಲ್ಲಿ ತನಗೆ ಮನಸ್ಸಿಲ್ಲದಿದ್ದರೂ ದೇವೇಗೌಡರ ಅಣತಿ ಮೇರೆಗೆ ಸಮ್ಮಿಶ್ರ ಸರ್ಕಾರ ರಚನೆಯಾಗಿ ಅದರ ನೇತೃತ್ವ ವಹಿಸಿದಾಗ ಮಂಡ್ಯ ರೈತರ 750 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ, ಕಾಂಗ್ರೆಸ್ ನಾಯಕರು ನೀಡಿದ ಕಿರುಕುಳ, ಅವಮಾನಗಳನ್ನು ಅವಡುಗಚ್ಚಿ ಸಹಿಸಿಕೊಂಡೆ, ರೈತರಿಗಾಗಿ ತಾನು ಇಷ್ಟೆಲ್ಲ ಮಾಡಿದರೂ ಕಾಂಗ್ರೆಸ್ ನಾಯಕರು, ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಏನು ಅಂತ ಕೇಳಿ ಜನರ ದಿಕ್ಕು ತಪ್ಪಿಸುವ ಕೆಲ ಮಾಡುತ್ತಿದ್ದಾರೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos