ಗ್ಯಾರೆಂಟಿ ಹೆಸರಿನಲ್ಲಿ ರಾಜ್ಯ ಸರ್ಕಾರ ಪಿಕ್ ಪಾಕೇಟ್ ಮಾಡುತ್ತಿದೆ: ಹೆಚ್‌ಡಿಕೆ

ಗ್ಯಾರೆಂಟಿ ಹೆಸರಿನಲ್ಲಿ ರಾಜ್ಯ ಸರ್ಕಾರ ಪಿಕ್ ಪಾಕೇಟ್ ಮಾಡುತ್ತಿದೆ: ಹೆಚ್‌ಡಿಕೆ

ಮಂಡ್ಯ: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿಯಾಗಿ ಹೆಚ್‌ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ. ಇಂದು ಮಂಡ್ಯದಲ್ಲಿ ಪ್ರಚಾರ ಮಾಡಿ ಮಾತನಾಡಿದರು, ನಿಮಗೆ ನನ್ನ ಮೇಲೆ ಕಿಂಚಿತ್ತಾದರೂ ಕರುಣೆ ಇದ್ದರೆ, ಈ ಬಾರಿ ನನ್ನನ್ನು ಗೆಲ್ಲಿಸಿ. ಈ ಚುನಾವಣೆಯಲ್ಲಿ ನನ್ನನ್ನು ನೀವು ಹಾಲಲ್ಲಾದರೂ ಹಾಕಿ, ನೀರಲ್ಲಾದರೂ ಹಾಕಿ ಎಂದು ಹೆಚ್‌ಡಿ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದರು.

ಈ ಚುನಾವಣೆಯನ್ನು ಹಣ ಬಲದ ಮೇಲೆ ಗೆಲ್ಲಲು ಹೊರಟಿದ್ದಾರೆ. ಮಂಡ್ಯದ ಜನರು ಸ್ವಾಭಿಮಾನಿಗಳು ಇದಕ್ಕೆಲ್ಲ ಆಸ್ಪದ ಕೊಡಲ್ಲ ಎಂದು ನಾನು ವಿಶ್ವಾಸ ಇಟ್ಡಿದ್ದೇನೆ. ನೀವೆಲ್ಲ ನನ್ನನ್ನು ಈ ಬಾರಿ ಗೆಲ್ಲಿಸಬೇಕು ಎಂದು ಹೇಳಿದರು.

ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿ ಕೊಡ್ತೀವಿ ಅಂತಿರೋದು ಬೋಗಸ್. ಈಗಿನ ರಾಜ್ಯ ಸರ್ಕಾರ ಪಿಕ್ ಪಾಕೇಟ್ ಸರ್ಕಾರ, ಈ ಸರ್ಕಾರ ಫ್ರೀ ಹೆಸರಲ್ಲಿ ಹಲವು ಕಡೆ ಬೆಲೆ ಏರಿಸಿ ಬೇರೆಯವರಿಗೆ ಕೊಡ್ತಿದ್ದಾರೆ ಅಷ್ಟೇ.

ನಾನು ಮೈತ್ರಿ ಮಾಡಿಕೊಂಡಿರೋದು ಪಕ್ಷ ಮತ್ತು ಜನರ ಉಳಿವಿಗಾಗಿ ಅಷ್ಟೇ, ನಾವು ಸ್ಚತಂತ್ರವಾಗಿ ಅಧಿಕಾರ ಬರಲು ಸಾಧ್ಯವಾಗಿಲ್ಲ. ಈಗ ಮೈತ್ರಿ ಮಾಡಿಕೊಂಡಿರುವುದು ರಾಜ್ಯದ ಜನಗಳಿಗಾಗಿ, ಬಡ ಜನರಿಗಾಗಿ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos