ಹಾವೇರಿ ಲೋಕ ಕ್ಷೇತ್ರದಲ್ಲಿ ‘ಕೈ’ ಅಭ್ಯರ್ಥಿ ಪ್ರಚಾರ

ಹಾವೇರಿ ಲೋಕ ಕ್ಷೇತ್ರದಲ್ಲಿ ‘ಕೈ’ ಅಭ್ಯರ್ಥಿ ಪ್ರಚಾರ

ಹಾವೇರಿ: ಹಾವೇರಿ ‘ಲೋಕ’ಕ್ಷೇತ್ರದ ‘ಕೈ’ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರ ಮಠ ಕ್ಷೇತ್ರದ ತುಂಬೆಲ್ಲ ಕಾಲಿಗೆ ಚಕ್ರಕಟ್ಟಿ ಪ್ರಚಾರ ಪ್ರಾರಂಭಿಸಿದ್ದಾರೆ. ಇಂದು ಹಾವೇರಿ ನಗರ ಸುತ್ತಮುತ್ತಲಿನ ಗ್ರಾಮದಲ್ಲಿ ಕೈ ಅಭ್ಯರ್ಥಿ ರೋಡ್ ಶೋ ಮೂಲಕ ಮತ ಬೇಟೆ ನೆಡೆಸಿದರು. ಈ ವೇಳೆ ಕಾಂಗ್ರೇಸ್ ನ ಸ್ಥಳೀಯ ಮುಖಂಡರು ಕೈ ಅಭ್ಯರ್ಥಿ ಪರ ಮತಬೇಟೆ ಮಾಡಿದರು.

ನಮ್ಮ ಕಾಂಗ್ರೇಸ್ ಅಭ್ಯರ್ಥಿ ಆನಂದಸ್ವಾಮಿ ಅವರಿಗೆ ಮತದಾತರು ಮತ ನೀಡಿ ಡೆಲ್ಲಿಗೆ ಕಳಿಸೋಕೆ ಸಜ್ಜಾಗಿದ್ದಾರೆ. ಇನ್ನು ಮಹಾಲಕ್ಷ್ಮಿ ಯೋಜನೆ ಈ ಬಾರಿ ಕಾಂಗ್ರೆಸ್ ಕೈ ಹಿಡಿಯೋದು ಗ್ಯಾರಂಟಿಯಾಗಿದೆ. ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಈ ಕಾರಣ ನಮ್ಮ ಹಾವೇರಿ ಅಭ್ಯರ್ಥಿ ಗೆಲುವು ಪಿಕ್ಸ್ ಆಗಿದೆ ಅಂತಾ ಕೈ ಅಭ್ಯರ್ಥಿ ಪರ ಪ್ರಚಾರ ಮಾಡಿದರು. ಈ ವೇಳೆ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ & ಮುಖಂಡರು, ನೂರಾರು ಕಾಂಗ್ರೇಸ್ ಕಾರ್ಯಕರ್ತರು ಭಾಗಿಯಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos