ಹತ್ಯೆ ಪ್ರಕರಣ : ಬಾಯ್ಬಿಟ್ಟ ಆರೋಪಿಗಳು

ಹತ್ಯೆ ಪ್ರಕರಣ : ಬಾಯ್ಬಿಟ್ಟ ಆರೋಪಿಗಳು

ಬೆಂಗಳೂರು, ಜೂ.28 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧಪಟ್ಟಂತೆ ದಿನಕ್ಕೆ ಹಲವು ಮಾಹಿತಿ ಆರೋಪಿಗಳು ಹೊರ ಹಾಕುತ್ತಿದ್ದಾರೆ. ಗೌರಿ ಲಂಕೇಶ್ ಅವರ ಹತ್ಯೆ ಕಾರ್ಯಾಚರಣೆಗೆ ಇವೆಂಟ್ ಎಂದು ಕೋಡ್ ನೇಮ್ ಇಡಲಾಯಿತು ಎನ್ನುವ ಮಾಹಿತಿಯನ್ನು ತನಿಖಾ ದಳದ ಮುಂದೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ದಾಬೊಲ್ಕರ್ ಹತ್ಯೆ ಪ್ರಕರಣದಲ್ಲಿ ವೀರೆಂದ್ರ ತಾವ್ಡೆ ಪ್ರಮುಖ ಆರೋಪಿಯಾಗಿದ್ದು, ಈತನೇ ಎಲ್ಲರಿಗೂ ತರಬೇತಿ ನೀಡುತ್ತಿದ್ದ. ಹತ್ಯೆಗೆ ಯಾವ ಪಿಸ್ತೂಲ್ ಉಪಯೋಗಿಸಬೇಕು, ಯಾವ ರೀತಿ ಟಾರ್ಗೆಟ್ ಮಾಡಬೇಕು.ತರಬೇತಿ ನೀಡುತ್ತಿದ್ದ, ಇನ್ನು 2013ರ ಆಗಸ್ಟ್ ಲ್ಲಿ ಪುಣೆ ಬಳಿ ದಾಬೋಲ್ಕರ್ ಅವರನ್ನು ಹತ್ಯೆ ಮಾಡುವ ವೇಳೆಯಲ್ಲಿ ‘ದಾಬೋಲ್ಕರ್ ಹಣೆಗೆ ಗುಂಡಿಟ್ಟು ಆನಂತರ ಬಲಗಣ್ಣಿಗೆ ಮತ್ತೊಂದು ಗುಂಡು ಹಾರಿಸುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos