ಹಾಸನ. ಮಾ. 27, ನ್ಯೂಸ್ ಎಕ್ಸ್ ಪ್ರೆಸ್: 16ನೇ ಲೋಕಸಭಾ ಚುನಾವಣೆ ಮೊದಲ ಹಂತದ ನಾಮಪತ್ರ ಸಲ್ಲಿಕೆ ಇಂದು ಅಂತ್ಯಗೊಂಡಿದ್ದು, ಒಟ್ಟು 10 ಮಂದಿಯಿಂದ 18 ನಾಮಪತ್ರ ಸಲ್ಲಿಕೆಯಾಗಿದೆ.
ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಚನ್ನರಾಯಪಟ್ಟಣ ತಾಲ್ಲೂಕಿನ ಹೊನ್ನಶೆಟ್ಟಿಹಳ್ಳಿಯ ಹೆಚ್.ಎಂ. ಚಂದ್ರೇಗೌಡ. ಜಾತ್ಯಾತೀತ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಪ್ರಜ್ವಲ್ .ಆರ್ (4ನಾಮಪತ್ರ), ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಎ. ಮಂಜು (3 ನಾಮಪತ್ರ) ಸಲ್ಲಿಸಿದ್ದಾರೆ.
ಭಾರತೀಯ ಡಾ. ಬಿ.ಆರ್ ಅಂಬೇಡ್ಕರ್ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಹೆಚ್.ಪಿ. ಮಂಜುನಾಥ್, ಪಕ್ಷೇತರ ಅಭ್ಯರ್ಥಿಗಳಾಗಿ ಅರಕಲಗೂಡು ತಾಲ್ಲೂಕಿನ ಬಾನುಗುಂದಿಯ ಬಿ.ಜೆ. ರಮೇಶ್ ಮನೆಮನೆ, ರಾಮನಾಥಪುರ ಹೋಬಳಿಯ ವಡ್ಡರಳ್ಳಿಯ ಕೆಂಪಯ್ಯ (2 ನಾಮಪತ್ರ), ಸಾಲಗಾಮೆ ಹೋಬಳಿಯ ರಾಮದೇವರಪುರದ ಆರ್.ಜಿ.ಸತೀಶ್ (2ನಾಮಪತ್ರ) ನಾಮಪತ್ರ ಸಲ್ಲಿಸಿದ್ದಾರೆ.
ಅರಕಲಗೂಡು ತಾಲ್ಲೂಕಿನ ಹೊನ್ನಾವರ ಗ್ರಾಮದ ಬಿ.ಪಿ ಕಾಳಪ್ಪ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ವಿನೋದ್ ರಾಜ್, ಹೊಳೆನರಸೀಪುರದ ಎಂ ಮಹೇಶ್ ಲೋಕೇಶ ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ ಹಾಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಂದು ಒಂದು ನಾಮಪತ್ರ ಸಲ್ಲಿಸಿದ್ದಾರೆ.