ಚಿಕ್ಕಬಳ್ಳಾಪುರ, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ಚಿಕ್ಕಬಳ್ಳಾಪುರ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದರೂ ನಮ್ಮ ಬಡತನ ಹಸಿವು ಸಂಪೂರ್ಣ ನಿಂತಿಲ್ಲ. ಜಿಲ್ಲೆಯಿಂದ ಕೂಲಿ ಕೆಲಸಕ್ಕಾಗಿ ಆಂಧ್ರಕ್ಕೆ ವಲಸೆ ಹೋಗಿದ್ದ ಬಡ ಕುಟುಂಬದ ಇಬ್ಬರು ಮಕ್ಕಳು ಹೊಟ್ಟೆ ಹಸಿವಿನಿಂದ ಮಣ್ಣು ತಿಂದು ಮೃತಪಟ್ಟ ಘಟನೆ ವರದಿಯಾಗಿದೆ. 6 ತಿಂಗಳ ಹಿಂದೆ ಗುಡಿಬಂಡೆಯ ಮಹೇಶ್-ನೀಲವೇಣಿ ದಂಪತಿ ಪುತ್ರ ಅವಿನಾಶ್ (3) ಮಣ್ಣು ತಿಂದು ಮೃತಪಟ್ಟಿದ್ದ. ಈಗ 3 ದಿನಗಳ ಹಿಂದೆ ಮಹೇಶ್ನ ಅಕ್ಕನ ಮಗಳು ವೆನ್ನೆಲಾಳ (4) ಸಾವನ್ನಪ್ಪಿದ್ದಾಳೆ. ದಂಪತಿಗೆ ಶ್ರೀನಿವಾಸ್, ಅಂಜಲಿ, ವನಿತಾ, 1 ವರ್ಷದ ಮಗು ಇದೆ. ಈ ದಂಪತಿ 10 ವರ್ಷಗಳ ಹಿಂದೆ ಅನಂತಪುರಕ್ಕೆ ವಲಸೆ ಹೋಗಿ ಕುಮ್ಮರವಾಂಡ್ಲಪಲ್ಲಿಯ ಹಮಾಲಿ ಕಾಲನಿಯಲ್ಲಿ ನೆಲೆಸಿದ್ದರು. ಬಡತನ, ಅಧಿಕ ಸಂತಾನ ಸೇರಿ ಆರ್ಥಿಕ ಸಂಕಷ್ಟದಿಂದ ಬಂಡೆ ಮೇಲೆ ಪ್ಲಾಸ್ಟಿಕ್ ಕವರ್ನಲ್ಲಿ ನಿರ್ವಿುಸಿದ್ದ ಡೇರೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಕುಡಿತದ ಚಟವಿದ್ದ ದಂಪತಿಗಳು ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.