ಹಾಸನಾಂಬೆ ಬಾಗಿಲು ತೆಗೆಯಲು 4 ದಿನ ಬಾಕಿ

ಹಾಸನಾಂಬೆ ಬಾಗಿಲು  ತೆಗೆಯಲು 4 ದಿನ ಬಾಕಿ

ಹಾಸನ, ಅ. 13 : ವರ್ಷಕ್ಕೋಮ್ಮೆ ದರ್ಶನ ನೀಡುವ ಹಾಸನಾಂಬೆ ದೇವತೆಯ ಬಾಗಿಲು ತೆಗೆಯಲು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದೆ. ಅದರೇ ಇತ್ತ ಕೆಲಸ ಮಾಡುವ ಅಧಿಕಾರಿಗಳು ಮಾತ್ರ ಈಗ ದೇವಸ್ಥಾನದ ಕಡೆ ಮುಖ ಮಾಡಿದ್ದಾರೆ. ಅದರೂ ಕಳಪೆ ಕಾಮಗಾರಿಯನ್ನು ಮಾತ್ರ ತಡೆಯಲು ಆಗಿಲ್ಲ
ಹಾಸನದಲ್ಲಿ ಹಾಸನಾಂಬೆಯ ಹೆಸರಲ್ಲಿ ಯಾರು ಹಣ ತಿಂದರೂ ಇಲ್ಲಿಯವರೆಗೂ ಯಾರು ಉದ್ದಾರ ಆಗಿಲ್ಲ ಅನ್ನೂ ಮಾತುಗಳು ಹಿಂದಿನಿಂದಲೂ ಕೇಳಿ ಬಂದಿವೆ. ಅದರೇ ಹಾಸನಾಂಬೆ ಇದೇ ತಿಂಗಳು 17 ನೇ ತಾರೀಕು ಬಾಗಿಲು ತೆಗೆಯುತ್ತೆ, ಅದರಂತೆ ಭಕ್ತರು ಕೂಡು ಹೊರ ರಾಜ್ಯ, ದೇಶ, ವಿದೇಶಗಳಿಂದ ಬಂದು ತಾಯಿಯ ದರ್ಷನ ಪಡೆಯುತ್ತಾರೆ. ಅದರೇ ಬರುವ ಭಕ್ತರಿಗೆ ಸಕಲ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಈಗ ಸನ್ನದವಾದಂತೆ ಕಾಣುತ್ತಿದೆ.
ಹಾಸನಾಂಬೆ ದೇವಸ್ಥಾನದ ಸುತ್ತಮುತ್ತ ಇರುವ ರಸ್ತೆಗಳನ್ನೋಮ್ಮೆ ನೋಡಿದರೆ ಸಾಕು, ನೆಲಕ್ಕೆ ಚಾಪೆ ಹಾಕಿ ಮೇಲೆತ್ತಿದಂತೆ ಕಂಡುಬರುತ್ತಿದೆ. ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಹಾಕಿರುವ ಡಾಂಬರ್ ಅನ್ನು ಕಿತ್ತು ತೋರಿಸುವದನ್ನು ನೋಡಿದರೆ ಅಧಿಕಾರಿಗಳು ದೇವರ ಹೆಸರಿನಲ್ಲಿ ಅದೇಷ್ಟು ಹಣ ಹೊಡೆಯಲು ಸಜ್ಜಾಗಿದ್ದಾರೆ ಅನ್ನೋದು ಸ್ಪಷ್ಟವಾಗುತ್ತೆ. ಡಾಂಬರ್ ಹಾಕಿ ಕೇವಲ 12 ಘಂಟೆ ಕಳೆದಿಲ್ಲ ಈಗಾಗಲೇ ಕಿತ್ತು ಬರುತ್ತಿದೆ. ಇನ್ನು ಬೇಕಾಬಿಟ್ಟಿ ಡಾಂಬರ್ ಹಾಕಿದ ಕಾಂಟ್ರಕ್ಟರ್ ಮಾತ್ರ ಕಾಣಿಸುತ್ತಿಲ್ಲ, ಇನ್ನು ಇದನ್ನು ಗಮನಿಸಬೇಕಾದ ಅಧಿಕಾರಿಗಳಿಗೆ ಏನು ಹೇಳಬೇಕು ಎಂಬ ಪ್ರಶ್ನೇಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos