ಹಾಸನದಲ್ಲಿ ವರುಣನ ಅಬ್ಬರ

ಹಾಸನದಲ್ಲಿ ವರುಣನ ಅಬ್ಬರ

ಹಾಸನ, ಸೆ. 0 3 : ಹಾಸನದಲ್ಲಿಯೂ ಕೂಡ ವರುಣ ಅಬ್ಬರಿಸುತ್ತಿದ್ದು, ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಸಕಲೇಶಪುರ ಭಾಗದಲ್ಲೂ ಹೆಚ್ಚಿನ ಮಳೆಯಾಗುತ್ತಿದ್ದು, ಬಿಸಿಲೆ ಘಾಟ್ ನಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗೆ ಉರುಳಿವೆ. ಬಿಸಿಲೆ ಘಾಟ್ ಸಂಚಾರ ಸ್ಥಗಿತವಾಗಿದೆ.
ಮರ ಬಿದ್ದ ಕಾರಣದಿಂದ ರಸ್ತೆ ಬಂದ್ ಆಗಿದ್ದು ವಾಹನಗಳು ಸಾಲು ಸಾಲಾಗಿ ನಿಂತಿವೆ. ಬಿಸಿಲೆ ಘಾಟ್ ಮೂಲಕ ಮಂಗಳೂರು, ಸುಬ್ರಮಣ್ಯಕ್ಕೆ ತೆರಳುವ ಎಲ್ಲಾ ವಾಹನಗಳು ಕೂಡ ರಸ್ತೆಯಲ್ಲೇ ನಿಂತಿವೆ. ಇದರಿಂದ ರಾತ್ರಿ ಪೂರ್ತಿ ರಸ್ತೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ಎದುರಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos