ಹಾಸನ, ಜು. 24 : ಏಕಾಏಕಿಯಾಗಿ ಕಾರ್ಮಿಕರ ಪ್ರತಿಭಟನೆ ಹಿನ್ನೆಲೆ ಲಾಠಿ ಚಾರ್ಜ್ ನಡೆಸಿರೋ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಹಾಸನ ಹೊರಭಾಗದಲ್ಲಿರೋ ಹಿಮ್ಮತ್ ಸಿಂಕಾ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಗೂ ಫ್ಯಾಕ್ಟರಿಯವರ ಹಿಂಸೆ ಖಂಡಿಸಿ ಕಾರ್ಮಿಕರು ದಿಢೀರ್ ಆಗಿ ಪ್ರತಿಭಟನೆ ಮಾಡಿದ್ರು. ಈ ಸಂದರ್ಭದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಪರಿಣಾಮ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ರು.
ಘಟನೆಯಲ್ಲಿ ಪೊಲೀಸರ ವಾಹನವನ್ನೇ ಪ್ರತಿಭಟನಾಕಾರರು ನೂಕಾಡಿ ತಳ್ಳಿದ್ದಾರೆ. ಪರಿಸ್ಥಿತಿ ಹತೋಟಿಗೆ ಬರುತ್ತಿದ್ದರೂ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.