ಹಾಸನಾಂಬೆಗೆ ಡಿಕೆಶಿ ಪತ್ನಿಯಿಂದ ಪೂಜೆ

ಹಾಸನಾಂಬೆಗೆ ಡಿಕೆಶಿ ಪತ್ನಿಯಿಂದ ಪೂಜೆ

ಹಾಸನ, ಅ. 26 : ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕೋರ್ಟ್ ನಿಂದ ಜಾಮೀನು ಸಿಕ್ಕಿರುವ ಹಿನ್ನಲೆ ಡಿಕೆಶಿ ಪತ್ನಿ ಉಷಾ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ತಾಯಿಗೆ ಪುತ್ರಿ ಐಶ್ವರ್ಯ ಸಾಥ್ ನೀಡಿದ್ದಾರೆ.
ಹಾಸನಾಂಬೆ ದರ್ಶನದ ಭಾಗ್ಯ ಭಕ್ತರಿಗೆ ವರ್ಷಕ್ಕೊಮ್ಮೆ ಮಾತ್ರ ಇರುತ್ತದೆ. ಜಾರಿ ನಿರ್ದೇಶನಾಲಯದ ಬಲೆಯಲ್ಲಿ ಸಿಲುಕಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಹಾಸನಾಂಬೆಯ ಆಶೀರ್ವಾದ ಸಿಕ್ಕಿದೆ. ಅತ್ತ ಮಾಜಿ ಸಚಿವರು ದೆಹಲಿಯಿಂದ ರಾಜ್ಯಕ್ಕೆ ಬರುವುದು ಖಚಿತವಾಗುತ್ತಿದ್ದಂತೆ, ಇತ್ತ ಕುಟುಂಬಸ್ಥರು ಹಾಸನಾಂಬೆ ದರ್ಶನ ಪಡೆದಿದ್ದಾರೆ.
.ಕೆ.ಶಿವಕುಮಾರ್ ಅವರ ಪತ್ನಿ ಉಷಾ ಮತ್ತು ಪುತ್ರಿ ಐಶ್ವರ್ಯ ಹಾಸನಾಂಬೆ ಸನ್ನಿಧಿಯಲ್ಲಿ ಕುಳಿತು ತಾಯಿಯ ದರ್ಶನ ಪಡೆದರು.

ಫ್ರೆಶ್ ನ್ಯೂಸ್

Latest Posts

Featured Videos