ಚಂಡೀಗಢ, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ಚುನಾವಣೆಯ ವೇಳೆ ಕಾಂಗ್ರೆಸ್ಗೆ ಮತ ಚಲಾಯಿಸಿದ ಎಂದು ಸೋದರ ಸಂಬಂಧಿ ಮೇಲೆ ಬಿಜೆಪಿ ಮುಖಂಡನೊಬ್ಬಗುಂಡು ಹಾರಿಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ರಾಜಾಸಿಂಗ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರಿಯಾಣದ ಜಜ್ಜರ್ ಜಿಲ್ಲೆಯ ಮಂಡಲ ಮಟ್ಟದ ಬಿಜೆಪಿ ಮುಖಂಡ ಧರ್ಮೆಂದರ್ ಸಿಲಾನಿ ಈ ಕೃತ್ಯವೆಸಗಿದ್ದಾರೆ. ತನ್ನ ಸೋದರ ಸಂಬಂಧಿ ರಾಜಾ ಸಿಂಗ್ ಚುನಾವಣೆಯ ವೇಳೆ ಕಾಂಗ್ರೆಸ್ ಗೆ ಮತ ಚಲಾಯಿಸಿದ ಅನ್ನೋ ಸಣ್ಣ ಕಾರಣಕ್ಕೆ ರಾಜಾಸಿಂಗ್ ಮನೆಗೆ ತೆರಳಿದ ಧರ್ಮೇಂದರ್ ಸಿಲಾನಿ, ಆತನ ಕಾಲುಗಳಿಗೆ ಮತ್ತು ಹೊಟ್ಟೆಗೆ ಗುಂಡು ಹಾರಿಸಿದ್ದಾರೆ. ಧರ್ಮೇಂದರ್ ಸಿಲಾನಿ ಬಳಿ ಇದ್ದ ಗನ್ ಗೆ ಲೈಸನ್ಸ್ ಇರಲಿಲ್ಲ ಎನ್ನಲಾಗಿದೆ. ಪೊಲೀಸರು ಧರ್ಮೇಂದರ್ ಸಿಲಾನಿ ವಿರುದ್ಧ ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಕೇಸು ದಾಖಲಿಸಿಕೊಂಡಿದ್ದು ಆತನ ಪತ್ತೆಗಾಗಿ ಬಲೆಬೀಸಿದ್ದಾರೆ.