ಹರಿಯಾಣದಲ್ಲಿ ಬಿಜೆಪಿ ಮುಖಂಡನಿಂದ ಕೊಲೆ ಯತ್ನ!

ಹರಿಯಾಣದಲ್ಲಿ ಬಿಜೆಪಿ ಮುಖಂಡನಿಂದ ಕೊಲೆ ಯತ್ನ!

ಚಂಡೀಗಢ, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ಚುನಾವಣೆಯ ವೇಳೆ ಕಾಂಗ್ರೆಸ್​ಗೆ ಮತ ಚಲಾಯಿಸಿದ ಎಂದು  ಸೋದರ ಸಂಬಂಧಿ ಮೇಲೆ ಬಿಜೆಪಿ ಮುಖಂಡನೊಬ್ಬಗುಂಡು ಹಾರಿಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ರಾಜಾಸಿಂಗ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹರಿಯಾಣದ ಜಜ್ಜರ್​ ಜಿಲ್ಲೆಯ ಮಂಡಲ ಮಟ್ಟದ ಬಿಜೆಪಿ ಮುಖಂಡ ಧರ್ಮೆಂದರ್​ ಸಿಲಾನಿ ಈ ಕೃತ್ಯವೆಸಗಿದ್ದಾರೆ. ತನ್ನ ಸೋದರ ಸಂಬಂಧಿ ರಾಜಾ ಸಿಂಗ್​  ಚುನಾವಣೆಯ ವೇಳೆ ಕಾಂಗ್ರೆಸ್ ಗೆ ಮತ ಚಲಾಯಿಸಿದ ಅನ್ನೋ ಸಣ್ಣ ಕಾರಣಕ್ಕೆ ರಾಜಾಸಿಂಗ್​ ಮನೆಗೆ ತೆರಳಿದ ಧರ್ಮೇಂದರ್‍ ಸಿಲಾನಿ, ಆತನ ಕಾಲುಗಳಿಗೆ ಮತ್ತು ಹೊಟ್ಟೆಗೆ ಗುಂಡು ಹಾರಿಸಿದ್ದಾರೆ. ಧರ್ಮೇಂದರ್​ ಸಿಲಾನಿ ಬಳಿ ಇದ್ದ ಗನ್‍ ಗೆ  ಲೈಸನ್ಸ್​ ಇರಲಿಲ್ಲ ಎನ್ನಲಾಗಿದೆ. ಪೊಲೀಸರು ಧರ್ಮೇಂದರ್​ ಸಿಲಾನಿ ವಿರುದ್ಧ ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಕೇಸು ದಾಖಲಿಸಿಕೊಂಡಿದ್ದು ಆತನ ಪತ್ತೆಗಾಗಿ ಬಲೆಬೀಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos