ಆನೇಕಲ್, ಅ. 19: ಐದು ವರ್ಷಗಳಿಂದ ಡಿಹೆಚ್ಎಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉಷಾ (28) ಎಂಬ ಮಹಿಳೆಗೆ ಇತ್ತೀಚೆಗೆ ಕಂಪನಿಯಲ್ಲಿ ಹೆಚ್ಚು ಟಾರ್ಚರ್ ಕೊಡುತ್ತಿದ್ದು, ಇಂದು ಆತ್ಮಹತ್ಯೆಗೆ ಯತ್ನಮಾಡಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಮಯಸಂದ್ರ ಬಳಿ ಈ ಘಡನೆ ನಡೆದಿದೆ.
ಲೆಟರ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಕುಂಟುಬಸ್ಥರು. ಲೆಟರ್ನಲ್ಲಿ ರಮೇಶ್, ಗಾಂಧಿ, ಪುಷ್ಪ, ನಾಗರಾಜು, ಹಾಗು ಬಾಲರಾಜು ಎಂಬುವವರು ಟಾರ್ಚರ್ ಕೊಡುತ್ತಿದ್ದರೆಂದು ಲೆಟರ್ ನಲ್ಲಿ ಬರೆದಿರುವ ಉಷಾ. ನನಗೆ ಕೊಟ್ಟಂತಹ ಕಷ್ಟವನ್ನು ಬೇರೆ ಯಾರಿಗೂ ಕೊಡಬೇಡಿ ಎಂದು ಲೆಟರ್ ನಲ್ಲಿ ತನ್ನ ನೋವನ್ನು ಹಂಚಿಕೊಂಡಿರುವ ಮಹಿಳೆ. ಡಿಹೆಚ್ಎಲ್ ಕಾರ್ಖಾನೆ ಮುಂಭಾಗದಲ್ಲಿ ಮಹಿಳೆಯ ಕುಟುಂಬಸ್ಥರು ಹಾಗು ಗ್ರಾಮಸ್ಥರಿಂದ ಪ್ರತಿಭಟನೆ. ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.