ಹಾವೇರಿ, ನ. 26 : ಯಡಿಯೂರಪ್ಪ ಸಿಎಂ ಆಗಿದ್ದಾಗ ಹರಕಲ ಸೀರೆ-ಮುರುಕಲು ಸೈಕಲ್ ಕೊಟ್ಟೆ. ಬೇರೇನು ಮಾಡಿದ್ದೀಯಪ್ಪ ಎಂದು ಸಿದ್ದರಾಮಯ್ಯ ಸಿಎಂ ಬಿಎಸ್ವೈ ಲೇವಡಿ ಮಾಡಿದರು.
ರಾಣೆಬೇನ್ನೂರು ಕ್ಷೇತ್ರದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆಯ ವೇಳೆ ಬಹಿರಂಗ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು,’ ನಾನು ನಮ್ಮ ಅಪ್ಪನ ಮನೆಯಿಂದ ಹಣ ತಂದು ರೈತರ ಸಾಲಮನ್ನಾ ಮಾಡಲಿಲ್ಲ, ನಿಮ್ಮ ಹಣ ನಿಮಗೆ ಖರ್ಚು ಮಾಡಿ ಸಾಲಮನ್ನಾ ಮಾಡಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಜಗದೀಶ್ ಶೆಟ್ಟರ್ ಬಿಜೆಪಿ ಸರ್ಕಾರದಲ್ಲಿ 30 ಸಾವಿರ ಸಾಲ ಮನ್ನಾ ಮಾಡಿ ಹಾಗೆಯೇ ಹೋದರು. ನಾನು ಅಧಿಕಾರಕ್ಕೆ ಬಂದ ಮೇಲೆ ರೈತರ ಸಂಪೂರ್ಣ ಸಾಲಮನ್ನಾ ಮಾಡಿದೆ ಎಂದು ತಿಳಿಸಿದರು.