ಹನುಮಂತನ ಮತಗಾನದ ಮೂಲಕ ಮತಜಾಗೃತಿ

ಹನುಮಂತನ ಮತಗಾನದ ಮೂಲಕ ಮತಜಾಗೃತಿ

ಹಾವೇರಿ, . 20, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸಲು ಮತ ಜಾಗೃತಿಯ ಅಭಿಯಾನಕ್ಕೆ ಹಾವೇರಿ ಲೋಕಸಭಾ ಕ್ಷೇತ್ರದ ರಾಯಭಾರಿ ಜನಪದ ಗಾಯಕ ಹನುಮಂತ ಲಮಾಣಿ ಅವರು ಮತದಾನ ಜಾಗೃತಿ ಬಂಡಿ ಏರುವ ಮೂಲಕ ಮತದಾರರ ಗಮನ ಸೆಳೆದರು.

ಏ.18 ರಂದು 1ನೇ ಹಂತದ ಮತದಾನ ಮುಕ್ತಾಯವಾಗಿ 2ನೇ ಹಂತದ ಮತದಾನಕ್ಕೆ ತಯಾರಾಗಿರುವ ಕರ್ನಾಟಕ ರಾಜ್ಯದಲ್ಲಿ ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಲಾಗಿದ್ದ ಮತಗಾನ ಕಾರ್ಯಕ್ರಮದಲ್ಲಿ ಗಾಯಕ ಹನುಮಂತಪ್ಪ ಲಮಾಣಿ ನಗರದ ವೀರಭದ್ರೇಶ್ವರ ದೇವಾಲಯದಿಂದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ವರೆಗೂ ಎತ್ತಿನ ಬಂಡಿ ಏರಿ ಮೆರವಣಿಗೆಯಲ್ಲಿ ಭಾಗವಹಿಸಿ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸಿದರು.

ಮತವ ಹಾಕೋ ಮನುಜ’ ಎಂಬ ಹಾಡಿನ ಮೂಲಕ ನಾಡಿನ ಮನೆಮಾತಾಗಿರುವ ಗಾಯಕ ಹನುಮ0ತನನ್ನ ನೋಡಲು ಎರಡು ಬದಿ ಸಂಚರಿಸುವ ಬೀದಿಗಳಲ್ಲಿ ಕೈ ಬೀಸಿ ಕರೆಯುವ ಮೂಲಕ ಅಭಿಮಾನಿಗಳು ಖುಷಿ ಪಟ್ಟರು. ನಗರದ ಜನತೆಯೂ ಹನುಮಂತ ಗಾನವನ್ನು ಸ್ವಾಗತಿಸಿ, ಸಂಭ್ರಮಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos