ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಯುವ ಪ್ರತಿಬೆಗಳಿಗೆ ಬೆಳಕಾದವರು ಸಂಗೀತ ನಿರ್ದೇಶಕ ಹಂಸಲೇಖ ಅವರು ಯಾವುದೇ ಒಂದು ದೃಶ್ಯ ನೋಡಿದರೆ ಸಾಕು ಅಲ್ಲೊಂದು ಹಾಡು ಕಟ್ಟುವವರು. ಅದೆಷ್ಟೋ ಪ್ರಶಸ್ತಿಗೆ ಭಾಜನರಾಗಿರುವ ಇವರಿಗೆ ಇದೀಗ ಮತ್ತೊಂದು ಪ್ರಶಸ್ತಿ ಲಭಿಸಿದೆ.
ಹೌದು, ಈ ವರ್ಷದ ಶ್ರೀ ಕೃಷ್ಣ ದೇವರಾಯ ಪ್ರಶಸ್ತಿಗೆ ಭಾಜನರಾಗಿದ್ದಾರೆ ಹಂಸಲೇಖ. ಸದ್ಯ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಹಂಸಲೇಖ. ತಮ್ಮ ಹಾಡಿನ ಮೂಲಕ ಅದೆಷ್ಟೋ ಮನಗಳ ಒಳಗೆ ಹೊಕ್ಕಿರುವ ಹಂಸಲೇಖ ಅವರಿಗೆ ಇದೀಗ ಈ ಪ್ರಶಸ್ತಿ ದಕ್ಕಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.
ಸದ್ಯ ಈ ಪ್ರಶಸ್ತಿಯನ್ನು ಏ. 5ರಂದು ನೀಡಲಾಗುತ್ತಿದೆ. ನಗರದ ವಯಲಿಕವಾಲ್ ನಲ್ಲಿರುವ ಶ್ರೀಕೃಷ್ಣ ದೇವರಾಯ ಕಲಾಮಂದಿರಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಾಹಿತಿ ಚಂದ್ರಶೇಖರ್ ಕಂಬಾರ್ ಉದ್ಘಾಟನೆ ಮಾಡಲಿದ್ದಾರೆ.