ಬಳ್ಳಾರಿ, ಅ.14 : ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷ ದೇವಸ್ಥಾನದ ಎದುರಿನ ರಥಬೀದಿಯ ಸಾಲುಮಂಟಪ ಧರೆಗುರುಳಿದೆ. ಹಂಪಿಯಲ್ಲಿ ನಿರಂತರ ಮಳೆ ಸುರಿದ ಹಿನ್ನಲೆ 18 ಕಂಬಗಳ ಸಾಲುಮಂಟಪ ಛಾವಣಿ ಸಮೇತ ಉರುಳಿಬಿದ್ದಿವೆ. ಕಳೆದೊಂದು ವಾರದಿಂದ ಸಾಲುಮಂಟಪದಲ್ಲಿ ನೀರು ಸೋರುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಇಲಾಖೆ ಅಧಿಕಾರಿಗಳ ನಿರ್ವಹಣೆಯ ಕೊರತೆಯಿಂದಾಗಿ ಸಾಲುಮಂಟಕ ಕುಸಿದಿದೆ ಎಂದೂ ಆರೋಪಿಸಿದ್ದಾರೆ.
ಬಳ್ಳಾರಿ:ವಿಶ್ವ ಪ್ರಸಿದ್ದ ಹಂಪಿಯಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಎದುರಿನ ರಥ ಬೀದಿಯ ಸಾಲುಮಂಟಪ ಧರೆಗುರುಳಿದೆ. ನಿರಂತವಾಗಿ ಸುರಿದ ಮಳೆಗೆ 18 ಕಂಬಗಳನ್ನ ಒಳಗೊಂಡ ಸಾಲು ಮಟಪ ಮೇಲ್ಚಾವಣಿ ಸಮೇತ ಉರುಳಿಬಿದ್ದಿವೆ. ಸತತ ಮಳೆಗೆ ಸಾಲು ಮಂಟಪದ ನೀರು ನಿಂತಿತ್ತು. https://t.co/apvBJw64eT pic.twitter.com/Opl3u4sAeu
— PowerNewz (@PowerNewz) October 14, 2019