ಮಳೆಗೆ ಕುಸಿದ ಸಾಲುಮಂಟಪ

ಬಳ್ಳಾರಿ, ಅ.14 : ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷ ದೇವಸ್ಥಾನದ ಎದುರಿನ ರಥಬೀದಿಯ ಸಾಲುಮಂಟಪ ಧರೆಗುರುಳಿದೆ. ಹಂಪಿಯಲ್ಲಿ ನಿರಂತರ ಮಳೆ ಸುರಿದ ಹಿನ್ನಲೆ 18 ಕಂಬಗಳ ಸಾಲುಮಂಟಪ ಛಾವಣಿ ಸಮೇತ ಉರುಳಿಬಿದ್ದಿವೆ. ಕಳೆದೊಂದು ವಾರದಿಂದ ಸಾಲುಮಂಟಪದಲ್ಲಿ ನೀರು ಸೋರುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಇಲಾಖೆ ಅಧಿಕಾರಿಗಳ ನಿರ್ವಹಣೆಯ ಕೊರತೆಯಿಂದಾಗಿ ಸಾಲುಮಂಟಕ ಕುಸಿದಿದೆ ಎಂದೂ ಆರೋಪಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos