ಹೆಚ್. ವಿಶ್ವನಾಥ್ ರಿಂದ ಹೊಸ ಬಾಂಬ್!

ಹೆಚ್. ವಿಶ್ವನಾಥ್ ರಿಂದ ಹೊಸ ಬಾಂಬ್!

ಬೆಂಗಳೂರು, ಜೂ.20: ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷರಾದ ಹೆಚ್ ವಿಶ್ವನಾಥ್ ಅವರು ತಮ್ಮ ಸ್ಥಾನಕ್ಕೆ ನೀಡಿರುವ ರಾಜೀನಾಮೆ ನೀಡಿರುವುದನ್ನು ಕೂಡಲೇ ಅಂಗೀಕಾರ ಮಾಡಬೇಕು ಇಲ್ಲವಾದರೆ ನಾನು ನನ್ನ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಯೋಚನೆ ಮಾಡಲಾಗುವುದು ಅಂತ ಹೇಳಿದ್ದಾರೆ.

ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡುತ್ತ ಹೆಚ್.ಡಿ ಕುಮಾರಸ್ವಾಮಿಯವರು ಅಧ್ಯಕ್ಷರಾಗಲಿ ಅಂತ ಹೇಳಿದರು. ಇನ್ನು ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಇಲ್ಲಿ ತನಕ ಯಾವುದೇ ಸಚಿವರು ನೇಮಕ ಆಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ಕೂಡಲೇ ಶಿಕ್ಷಣ ಸಚಿವರನ್ನು ನೇಮಕ ಮಾಡುವಂತೆ ಸಿಎಂ ಅವರನ್ನು ಆಗ್ರಹಿಸಿದರು. ಇನ್ನು ನನ್ನ ಮಂತ್ರಿ ಮಾಡುವಂತೆ ಯಾರನ್ನು ಕೇಳಿಕೊಂಡಿಲ್ಲ, ಈ ಬಗ್ಗೆ ದೇವೇಗೌಡ್ರು ಕೂಡ ಈ ಬಗ್ಗೆ ಸ್ಪಷ್ಟನೆ ಮಾಡಿದ್ದಾರೆ. ಇದಲ್ಲದೇ ಸಿಎಂ ಕುಮಾರಸ್ವಾಮಿಯವರ ಜೊತೆಗೆ ಇರಬೇಕು ಎನ್ನುವುದು ನನ್ನ ಅಭಿಲಾಷೆ ಆದರೆ ಈ ಬಗ್ಗೆ ಸಿಎಂ ಯಾಕೋ ತಲೆಕೆಡಿಸಿಕೊಳ್ಳುವುದಿಲ್ಲ ಅಂತ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos