ನವದೆಹಲಿ: ಗೋಧ್ರಾ ಗಲಭೆ ಸಂದರ್ಭದಲ್ಲಿ ನಡೆದ ನರೋಡಾ ಪಟಿಯಾ ಹತ್ಯಾಕಾಂಡ ಪ್ರಕರಣದಲ್ಲಿ ಜೈಲು ಸೇರಿದ್ದ ನಾಲ್ವರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಉಮೇಶ್ಭಾಯ್ ಭವಾರ್ಡ್, ರಾಜ್ಕುಮಾರ್, ಹರ್ಷದ್ ಹಾಗೂ ಪ್ರಕಾಶ್ಭಾಯ್ ರಾಥೋಡ್ಗೆ ಜಾಮೀನು ಮಂಜೂರಾಗಿದೆ. ಇವರಿಗೆ ಗುಜರಾತ್ ಹೈಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದ್ರೆ ಗುಜರಾತ್ ಹೈಕೋರ್ಟ್ ನೀಡಿರುವ ಶಿಕ್ಷೆಯ ಆದೇಶ ಚರ್ಚಾಸ್ಪದವಾಗಿದೆ ಎಂದು ಹೇಳಿ ಸುಪ್ರೀಂ ಕೋರ್ಟ್ ಈ ನಾಲ್ವರಿಗೆ ಜಾಮೀನು ನೀಡಿದೆ.
ಗೋಧ್ರಾ ಪ್ರಕರಣದ ಬಳಿಕ 2002ರ ಫೆಬ್ರವರಿ 28ರಂದು ನರೋಡಾ ಪಟಿಯಾ ಬಳಿ 97 ಜನರನ್ನ ಹತ್ಯೆ ಮಾಡಲಾಗಿತ್ತು. ಕಳೆದ ವರ್ಷ ಜೂನ್ನಲ್ಲಿ ಗುಜರಾತ್ ಹೈಕೋರ್ಟ್, ಭಜರಂಗದಳ ಮುಖಂಡ ಬಾಬು ಭಜರಂಗಿ ಸೇರಿದಂತೆ ಪ್ರಕರಣದ 16 ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಹಾಗೇ ಮಾಜಿ ಬಿಜೆಪಿ ಸಚಿವೆ ಮಾಯಾ ಕೊಡ್ನಾಣಿ ಸೇರಿದಂತೆ 18 ಮಂದಿಯನ್ನು ಖುಲಾಸೆಗೊಳಿಸಿತ್ತು.