ಪ್ರಧಾನಿಯನ್ನು ಹೊಗಳಿದ ಜಿಟಿ

ಪ್ರಧಾನಿಯನ್ನು ಹೊಗಳಿದ ಜಿಟಿ

ಮೈಸೂರು, . 30: ದಸರಾ ಹಿನ್ನೆಲೆಯಲ್ಲಿ ಕಾಮಗಾರಿಗಳ ಪರಿಶೀಲನೆಗಾಗಿ ಇಂದು ಮೈಸೂರಿನಲ್ಲಿ ವಿ. ಸೋಮಣ್ಣ, ಪ್ರತಾಪ್ ಸಿಂಹ ಮೊದಲಾದ ಬಿಜೆಪಿ ನಾಯಕರ ಜೊತೆ ಜಿಟಿಡಿ ಕೂಡ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಬಿಜೆಪಿ ಬಗ್ಗೆ ತಮಗಿರುವ ಮೃದು ಧೋರಣೆ ಮುಂದುವರಿಸಿದ್ದಾರೆ.

ನರೇಂದ್ರ ಮೋದಿ ಅವರು ಈ ದೇಶಕ್ಕೆ ಬೇಕು. ದೇಶದ ವ್ಯಕ್ತಿ ಅವರು. ಈ ದೇಶದ ರಕ್ಷಣೆಗೆ ಅವರ ಅಗತ್ಯವಿದೆ. ಕಾಶ್ಮೀರ ವಿಚಾರದಲ್ಲಿ ಅವರು ಮಾಡುತ್ತಿರುವ ಕೆಲಸವನ್ನು ನೀವೆಲ್ಲಾ ನೋಡುತ್ತಿದ್ದೀರಿ. ಅವರಿಗೆ ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಮಾತ್ರ ಮುಖ್ಯ. ಮೊದಲು ದೇಶ, ನಂತರ ಬೇರೆಲ್ಲಾ ಎಂಬ ಭಾವನೆ ಇರುವವರು. ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಒಳ್ಳೆಯ ಮಾತನಾಡುವುದು ತಪ್ಪಾ?”ಎಂದು ಕೇಳಿದ್ಧಾರೆ.

 

ಫ್ರೆಶ್ ನ್ಯೂಸ್

Latest Posts

Featured Videos