ಬೆಂಗಳೂರು:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನೀಡಿದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ 4 ಗ್ಯಾರಂಟಿಗಳನ್ನು ಜಾರಿಗೆ ಮಾಡಲಾಗಿದೆ.
ಅಗಸ್ಟ್ 30 ರಂದು ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಮಹತ್ವದ ಗ್ಯಾರಂಟಿ ಗೃಹಲಕ್ಷ್ಮೀಗೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ರಾಜ್ಯದ ಫಲಾನುಭವಿ ಮಹಿಳೆಯರ ಖಾತೆಗೆ ಅಂದೆ ಎರಡು ಸಾವಿರ ರೂಪಾಯಿ ಹಣವನ್ನ ಸರ್ಕಾರ ಕ್ರೆಡಿಟ್ ಮಾಡಲಾಗಿದೆ. ಹಣ ಖಾತೆಗೆ ಬಂದ ಬ್ಯಾಂಕಿನ ಮೆಸೇಜ್ ಕೆಲ ಮಹಿಳೆಯರಿಗೆ ಬಂದಿದ್ರೆ ಇನ್ನೂ ಕೆಲವು ಮಹಿಳೆಯರಿಗೆ ಬ್ಯಾಂಕಿನಿಂದ ಮೆಸೇಜ್ ಬಂದಿಲ್ಲ ಇದ್ರಿಂದ ಏನಾದ್ರೂ ಆಗ್ಲಿ ಒಮ್ಮೆ ಗೃಹಲಕ್ಷ್ಮೀ ಹಣ ಬ್ಯಾಂಕ್ ಅಕೌಂಟ್ ಗೆ ಬಂದಿದ್ದೆಯೋ ಇಲ್ವೋ ಚೆಕ್ ಮಾಡೇ ಬಿಡೋಣ ಅಂತ ಚಿಕ್ಕಮಗಳೂರು ನಗರದ ಎಂ.ಜಿ ರಸ್ತೆಯಲ್ಲಿರುವ IDBI ಬ್ಯಾಂಕಿನ ಮುಂದೆ ಸಾವಿರಾರು ಮಹಿಳೆಯರು ಕ್ಯೂ ನಿಂತಿದ್ರು.ಬೆಳಗ್ಗೆ 7 ಗಂಟೆಯಿಂದ ಬ್ಯಾಂಕಿನ ಮುಂದೆ ನಿಂತಿದ್ದ ಮಹಿಳೆಯರನ್ನ ನಿಯಂತ್ರಿಸಲು ಪೊಲೀಸರು ಬ್ಯಾಂಕ್ ಸಿಬ್ಬಂದಿ ಹರಸಾಹಸ ಪಟ್ರು.