ಗ್ರೀನ್ ಇಂಜಿನಿಯರ್ಸ್ ಡೇ

ಗ್ರೀನ್ ಇಂಜಿನಿಯರ್ಸ್ ಡೇ

ಆನೇಕಲ್,  ಸೆ. 16: ಇಂದು ಬೆಂಗಳೂರು ನಗರದ ಹೊರವಲಯ ಆನೇಕಲ್ ನ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ 51 ನೇ ಇಂಜಿನಿಯರ್ಸ್ ಡೇ ಹಾಗು 158 ನೇ ವಿಶ್ವೇಶ್ವರಯ್ಯ ನವರ ಹುಟ್ಟು ಹಬ್ಬದ ಸಲುವಾಗಿ ವಿಧ್ಯಾರ್ಥಿಗಳ ದೈಹಿಕ ಬೆಳವಣಿಗೆ ಹಾಗು ಒಳ್ಳೆಯ ಆರೋಗ್ಯದ ದೃಷ್ಟಿಯಿಂದ ಮ್ಯಾರಥಾನ್ ಓಟ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಹೌದು. ಇಂದು  ಆನೇಕಲ್ ನ ಹೊಸೂರು ರಸ್ತೆಯಲ್ಲಿರುವ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಗ್ರೀನ್ ಇಂಜಿನಿಯರ್ಸ್ ಡೇ ಎಂಬಾ ಶೀರ್ಷಿಕೆಯಲ್ಲಿ ಮ್ಯಾರಥಾನ್ ಓಟವನ್ನು ಆಯೋಜನೆ ಮಾಡಿದ್ದು ಆನೇಕಲ್ ಪಟ್ಟಣದ ವೆಂಕಟೇಶ್ವರ ವೃತ್ತದಿಂದ ಸಾಯಿ ರಾಮ್ ಕಾಲೇಜಿನ ವರೆಗೆ 450 ಕ್ಕೂ ಹೆಚ್ಚು ವಿಧ್ಯಾರ್ಥಿಗಳು 3 ಕಿಲೋಮೀಟರ್ ಹಾಗು 5 ಕಿಲೋಮೀಟರ್ ಓಟದಲ್ಲಿ ಭಾಗವಹಿಸಿದ್ದರು.

ಇನ್ನು ಇತ್ತಿಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಫಿಟ್ ಇಂಡಿಯಾ ಕಾರ್ಯಕ್ರಮವನ್ನು ಮಾಡಿದ್ದರು ಅದರ ಸಲುವಾಗಿ ಇಂದು ನಾವು ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ದೈಹಿಕ ಬೆಳವಣಿಗೆ ಒಳ್ಳೆಯ ಆರೋಗ್ಯ ಹೊಂದಿರಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲಾ ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ಸಾಯಿ ರಾಮ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಮ್ಯಾರಥಾನ್ ಓಟ ನಡೆಸಿದ್ದೇವೆ ಎಂದು ಈ  ಕಾಲೇಜಿನ ಆಡಳಿತ ಮಂಡಯಳಿ ಅರುಣ್ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos