ಮೈಸೂರು, ಸೆ. 18 : 33 ವರ್ಷದ ಗ್ರಾ.ಪಂ. ಸದಸ್ಯರೊಬ್ಬರ ಶವ ಕಾರಿನಲ್ಲಿ ಪತ್ತೆಯಾಗಿದೆ. ಕೆ.ಆರ್.ನಗರ ತಾಲೂಕಿನ ಹನಸೋಗೆ ಗ್ರಾ.ಪಂ. ಸದಸ್ಯ ಅಶೋಕ ಮೃತ ವ್ಯಕ್ತಿ . ಪಿರಿಯಾಪಟ್ಟಣದ ಕಾರು ರಾವಂದೂರು -ಅತ್ತಿಗೋಡು ರಸ್ತೆಯ ಬದಿಯಲ್ಲಿ ಕಾರು ನಿಂತಿದ್ದು, ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ಕಾರ್ನ ಗ್ಲಾಸ್ ಒಡೆದು ನೋಡಿದಾಗ ಒಳಗಿದ್ದ ವ್ಯಕ್ತಿ ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ. ಕಾರ್ನಲ್ಲಿ ಇದ್ದ ಪೋನ್ ನಂಬರ್ಗಳಿಗೆ ಕರೆ ಮಾಡಿ ವಿಚಾರಿಸಿದಾಗ ಇವರು ಗ್ರಾಪಂ ಸದಸ್ಯ ಅಶೋಕ್ ಎಂಬುದು ತಿಳಿದುಬಂದಿದ್ದು, ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.