ಬೆಂಗಳೂರು, ಜೂನ್. 13: ಸರ್ಕಾರಿ ಪಾಠಶಾಲೆಗಳನ್ನು ದೇಗುಲಕ್ಕೆ ಹೋಲಿಸುತ್ತಾರೆ. ಆದರೆ, ಬೆಂಗಳೂರಿನ ಮಹದೇವ ಪುರದಲ್ಲಿರುವ ಸರ್ಕಾರಿ ಶಾಲೆಯನ್ನು ನೋಡಿದರೆ ಇದು ಶಾಲೆನಾ ಅನ್ನೋ ಅನುಮಾನ ಬರುತ್ತೆ. ಹೌದು, ಮಹದೇವ ಪುರ ಕ್ಷೇತ್ರ ಹಗ್ದೂರ ವಾರ್ಡ್ನ ರಾಮಗೊಂಡನಹಳ್ಳಿ ಮುಖ್ಯ ರಸ್ತೆ ಬಳಿ ಇರುವ ಸರ್ಕಾರಿ ಪಾಠಶಾಲೆಯ ಮುಂಭಾಗ ಕಸದ ರಾಶಿ ರಾಶಿ ಯಿಂದ ದುರ್ವಾಸನೆ . ಪಕ್ಕದಲೇ ಇರುವ ಬಿಬಿಎಂಪಿ ಕಛೇರಿ, ಕಛೇರಿಯ ಯಾವ ಒಬ್ಬ ಅಧಿಕಾರಿಗಳಿಗೂ ಕಸದ ರಾಶಿ ಕಾಣಲಿಲ್ಲ ಕಸದ ಗುತ್ತಿಗೆದಾರರಿಗೂ ಪೌರ ಕಾರ್ಮಿಕರಿಗೂ ಕಾಣದೆ ಇರುವುದು ವಿಪರ್ಯಾಸ, ಇದರಿಂದಾಗಿ ಶಾಲ ಮಕ್ಕಳಿಗೆ ರೋಗಾಣುಗಳು ಹರಡುವದು ನಿಶ್ಚಿತ.
ಪಾದಚಾರಿಗಳಿಗೂ ತೊಂದರೆ ತಪ್ಪಿದಲ್ಲ. ಶಾಲೆ ಮುಂಭಾಗ ಬಿಬಿಎಂಪಿ ಅಧಿಕಾರಿಗಳು ಯಾವುದೆ ಕಸ ಹಾಕಬಾರದೆಂಬ ನಾಮ ಫಲಕಗಳು ಸಹ ಹಾಕಲ್ಲಿಲ. ಒಂದು ವೇಳೆ ನಾಮ ಫಲಕ ಹಾಕಿದರೆ ಕಸ ಹಾಕುವುದಾದರು ತಪ್ಪಿಸ ಬಹುದು. ಇನ್ನಾದರು ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳತ್ತಾರೆನೊ ಕಾದು ನೋಡಬೇಕು.