ಗೂಂಡಾಗಿರಿ ಇಲ್ಲಿ ನಡೆಯೋಲ್ಲ: ಸಚಿವ ಡಿಕೆಶಿಗೆ ಶೆಟ್ಟರ್‌ ಎಚ್ಚರಿಕೆ

ಗೂಂಡಾಗಿರಿ ಇಲ್ಲಿ ನಡೆಯೋಲ್ಲ: ಸಚಿವ ಡಿಕೆಶಿಗೆ ಶೆಟ್ಟರ್‌ ಎಚ್ಚರಿಕೆ

ಬೆಳಗಾವಿ, ಮೇ.9, ನ್ಯೂಸ್ ಎಕ್ಸ್ ಪ್ರೆಸ್: ರಾಮನಗರ, ಕನಕಪುರದಲ್ಲಿ ನಡೆಸಿದ ಗೂಂಡಾ ಪ್ರವೃತ್ತಿ ಕುಂದಗೋಳದಲ್ಲಿ ನಡೆಯುವುದಿಲ್ಲ ಅಂತ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರು ಸಚಿವ ಡಿಕೆ ಶಿವಕುಮಾರ್‌ ಅವರಿಗೆ ಟಾಂಗ್ ನೀಡಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ ಡಿಕೆಶಿಗೆ ಕುಂದಗೋಳ ಉಪ ಚುನಾವಣೆಗೆ ಉಸ್ತುವಾರಿ ಕೊಟ್ಟಿದ್ದಾರೆ. ಯಾಕೆ ಕಾಂಗ್ರೆಸ್‌ನಲ್ಲಿ ಉತ್ತರ ಕರ್ನಾಟಕದ ನಾಯಕರೇ ಇಲ್ವಾ ಅಥವಾ ಚುನಾವಣೆ ನೋಡಿಕೊಳ್ಳುವ ಧಮ್‌ ಇಲ್ಲವೇ ಎಂದು ಶೆಟ್ಟರ್‌ ಪ್ರಶ್ನಿಸಿದರು. ಇನ್ನು ನಮ್ಮ ಕಾರ್ಯಕರ್ತರಿಗೆ ಕೈ ಹಾಕಿದ್ರೆ ಅದರ ಪರಿ ಮ ನೆಟ್ಟಗೆ ಇರುವುದಿಲ್ಲ ಎಂದು ಶೆಟ್ಟರ್‌ ಎಚ್ಚರಿಕೆ ನೀಡಿದರು. ಇದು ಕನಕಪುರ , ರಾಮನಗರ ಅಲ್ಲ ಎಂಬುದು ಗಮನದಲ್ಲಿರಲಿ ಎಂದು ಜಗದೀಶ್‌ ಶೆಟ್ಟರ್‌ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos