ಕೊರಟಗೆರೆ: ರೈತರನ್ನು ಭಿಕ್ಷುಕರನ್ನಾಗಿ ಮಾಡಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ದೊರಣೆ ಖಂಡಿಸಿ ವಿವಿಧ ಸಂಘಟನೆಗಳ ಬೆಂಲದೊಂದಿಗೆ ಕರ್ನಾಟಕ ಬಂದ್ ನಡೆಸುವುದಾಗಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೆ. ೨೮ರಂದು ಕರ್ನಾಟಕ ರಾಜ್ಯ ಬಂದ್ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕೋಡ್ಲಹಳ್ಳಿ ಸಿದ್ದರಾಜು ಮಾತನಾಡಿ ಕೇಂದ್ರ ಸರಕಾರ ದೇಶದ ಎಲ್ಲಾ ನಾಗರೀಕರ ಬಾಯಿ ಮುಚ್ಚಿಸಿ ಸುಗ್ರೀವಾಜ್ಞಾ ಮೂಲಕ ರೈತ ವಿರೋಧಿ ಕಾನೂನು ಜಾರಿಗೆ ತಂದಿದೆ. ಕೃಷಿ ಭೂಮಿಗೆ ಉಚಿತವಾಗಿ ಪಂಪ್ಸೆಟ್ಗೆ ಅಳವಡಿಸಿರುವ ವಿದ್ಯುತ್ಗೆ ಹಣ ವಸೂಲಿಗೆ ಮುಂದಾಗಿ ರೈತರು ಬೀದಿಗೆಬೀಳುವ ಪರಿಸ್ಥಿತಿ ನಿರ್ಮಾಣ ಮಾಡಿ ರೈತರು ಕೃಷಿಯಿಂದ ಹೊರ ಬರುವಂತೆ, ರೈತ ಉತ್ಪನ್ನಗಳಿಗೆ ಬೆಲೆ ಸಿಗದ ಸಾಕಷ್ಟು ತೊಂದರೆ ಎದುರಾಗುತ್ತದೆ ಎಂದು ಹೇಳಿದರು.