ಬೆಂಗಳೂರು, ಸೆ. 26 : ‘ಗೀತಾ ‘ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ ಈ ಚಿತ್ರದಲ್ಲಿ ತುಂಬ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಅವರೇ ಹೇಳಿರುವಂತೆ ‘ಗೀತಾ’ ಚಿತ್ರ ಅವರ ಮನಸ್ಸಿಗೆ ತುಂಬ ಹತ್ತಿರವಾದ ಚಿತ್ರ. ಹೋರಾಟಗಾರನ ಪಾತ್ರದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಗಣೇಶ್ ಪ್ರೇಕ್ಷಕರೆದುರಿಗೆ ಬರುತ್ತಿದ್ದಾರೆ. ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಗಣೇಶ್ ಕೂಡ ಭಾಗಿಯಾಗಿದ್ದರು. ಈಗ ಗೀತಾ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದಾರೆ. “ಟ್ರೇಲರ್ ಮತ್ತು ಕಾನ್ಸೆಪ್ಟ್ ತುಂಬ ಕುತೂಹಲಕಾರಿಯಾಗಿದೆ. 27ರಂದು ಗೀತಾ ಚಿತ್ರ ರಿಲೀಸ್ ಆಗುತ್ತಿದೆ. ಗೀತಾ ತಂಡಕ್ಕೆ ಮತ್ತು ಗಣೇಶ್ ಅವರಿಗೆ ಒಳ್ಳೆಯದಾಗಲಿ, ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿ” ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.