ಗಾಯದ ಮೇಲೆ ಬರೆ ಎಳೆದ ಮಳೆರಾಯ!

ಗಾಯದ ಮೇಲೆ ಬರೆ ಎಳೆದ ಮಳೆರಾಯ!

ಹಾವೇರಿ, ಅ. 4 : ದೇಶದೆಲ್ಲೆಡೆ ಈರುಳ್ಳಿ ಗಗನಕ್ಕೇರಿರುವ ಸೂಕ್ತ ಬೆಲೆ ಸಿಗದೆ ರೈತರು ಕಂಗೆಟ್ಟಿದ್ದರು. ರಾಣೆಬೆನ್ನೂರಿನ ಎಪಿಎಂಸಿ ಬಳಿ ಬೆಲೆಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆಯೇ ಸುರಿದ ಭಾರೀ ಮಳೆಗೆ ಈರುಳ್ಳಿ ಬೆಲೆಯಲ್ಲಿ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಎಪಿಎಂಸಿಯಲ್ಲಿ ಕಳೆದ ಬಾರಿ ಈರುಳ್ಳಿ ದರದಲ್ಲಿ ಏರಿಕೆಯಾಗಿದ್ದರಿಂದ ಈ ಬಾರಿ ಕೂಡ ರೈತರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ದಾಸ್ತಾನನ್ನು ಮಾರುಕಟ್ಟೆ ತಂದಿದ್ದರು. ಆದರೆ, ಈರುಳ್ಳಿ ಬೆಲೆ ಕ್ವಿಂಟಾಲ್ಗೆ 2,600 ರೂ.ನಿಂದ 3 ಸಾವಿರ ರೂ.ವರೆಗೂ ದರವಿತ್ತು. ಆದರೆ, ಗುರುವಾರದ ವಹಿವಾಟಿನಲ್ಲಿ ಈ ದರ 600 ರೂ.ನಿಂದ 1,300 ರೂ.ಗೆ ಇಳಿಕೆಯಾಗಿದೆ. ದಿಢೀರನೆ ಬೆಲೆ ಇಳಿಸಿದ್ದಕ್ಕಾಗಿ ಎಪಿಎಂಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಫ್ರೆಶ್ ನ್ಯೂಸ್

Latest Posts

Featured Videos