ಗಂಗಾವತಿ, ಅ.24 : ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ ಚಿರತೆ, ಕರಡಿ ಹಾವಳಿ ಹೆಚ್ಚಾಗಿದ್ದು ಕರಡಿ ಅಂಜನಾದ್ರಿ ಬೆಟ್ಟದ ಮೇಲಿನ ದೇಗುಲದ ಬಳಿ ಆಗಮಿಸಿ ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.
ದೇಗುಲದ ಬಳಿ ಪ್ಲಾಸ್ಟಿಕ್ ಡಬ್ಬಿ ಇತರೆ ಸಾಮಾನುಗಳಲ್ಲಿ ತಿನ್ನುವ ಪದಾರ್ಥಗಳ ಬಗ್ಗೆ ತಡಕಾಡಿದ ದೃಶ್ಯ ದೇಗುಲದ ಸಿಸಿ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿದೆ.
ಅಂಜನಾದ್ರಿ ಭಕ್ತರು : ಕರಡಿ ಚಿರತೆ ಪ್ರಾಣಿಗಳು ಅಂಜನಾದ್ರಿ ಪ್ರತ್ಯಕ್ಷವಾಗಿರುವ ಕಾರಣ ಅಂಜನಾದ್ರಿಗೆ ಆಗಮಿಸುವ ಭಕ್ತರಿಗೆ ಭಯವನ್ನುಂಟು ಮಾಡಿದೆ. ಎರಡು ಚಿರತೆಗಳು ಕಂಡು ಬಂದಿದ್ದವು.