ಗಂಗಾವತಿ, ಆ. 9: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಮಳೆ ರಾಯನ ಆರ್ಭಟಕ್ಕೆ ಗುಳದಾಳ ಬಳಿಯ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬೊಂಗಾ ಕಾಣಿಸಿಕೊಂಡಿದೆ. ಎಡದಂಡೆ ಮುಖ್ಯ ಕಾಲುವೆಯ ವಿತರಣೆ ಕಾಲುವೆ 23 ಮತ್ತು 24ರ ನಡುವೆ ಇದು ಕಾಣಿಸಿಕೊಂಡಿದೆ.
ಎಡದಂಡೆ ಕಾಲುವೆಯ 1,716 ಚೈನೇಜ್, 31ನೇ ಮೈಲಿ ಬಳಿಯೂ ಬೊಂಗಾ ಕಾಣಿಸಿಕೊಂಡಿದ್ದು, ಅಕ್ವಾಡಕ್ಟ್ ಗೋಡೆ ಬಳಿಯಲ್ಲೂ ನೀರಿನ ಸೋರಿಕೆ ಕಂಡುಬಂದಿದೆ. ಹೆಗ್ಗಣಗಳು ಮತ್ತು ಉಡಾಗಳು ಬಿಲ ಕೊರೆದಿರುವುದು ಬೊಂಗಾ ಬೀಳಲು ಕಾರಣ ಎಂದು ಹೇಳಲಾಗಿದೆ.
ಕಾಲುವೆಯಲ್ಲಿ ಸದ್ಯ 2,300 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗಂಗಾವತಿ ಮತ್ತು ಚಿಕ್ಕಡಂಕನಕಲ್ ಎಸ್ಕೇಪ್ನಿಂದ ನೀರನ್ನು ಹೊರಬಿಡಲಾಗುತ್ತಿದೆ.