ಕಾರು ಅಪಘಾತದಿಂದ ಮತ್ತಿಮೂಡ ಪಾರು

ಕಾರು ಅಪಘಾತದಿಂದ ಮತ್ತಿಮೂಡ ಪಾರು

ಕಲಬುರಗಿ, ಡಿ, 18 : ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಅವರ ಕಾರು ಅಪಘಾತಕ್ಕೀಡಾಗಿದ್ದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೋಳಸಂಗಿ ಬಳಿ ರಾಷ್ಟ್ರೀಯ ಹೆದ್ದಾರಿ -50ರಲ್ಲಿ ನಡೆದಿದೆ.
ಶಾಸಕರ ಕಾರು ಪ್ರಯಾಣಿಸುತ್ತಿರುವ ವೇಳೆ ಎದುರಿಗೆ ಬೈಕ್ ಸವಾರ ಅಡ್ಡಬಂದ ಹಿನ್ನಲೆಯಲ್ಲಿ ಕಾರ್ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಹಿಂಬದಿಯಿಂದ ಮತ್ತೊಂದು ಕಾರು ಬಂದು ಶಾಸಕರ ಕಾರಿಗೆ ಡಿಕ್ಕಿ ಹೊಡೆದಿದೆ.
ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಈ ಬಗ್ಗೆ ಎನ್ ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos