ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಚಿತ ಆರೋಗ್ಯ ತಪಾಸಣಾ ಶಿಬಿರ

ಪೀಣ್ಯ ದಾಸರಹಳ್ಳಿ, ಸೆ. 9: ಆದ್ಯ ಪೌಂಡೇಶನ್, ಲಯನ್ಸ್ ಕ್ಲಬ್ ಬೆಂಗಳೂರು, ಶಾರದಾ ರೋಟರಿ ಕಣ್ಣಿನ ಆಸ್ಪತ್ರೆ ವತಿಯಿಂದ ದಾಸರಹಳ್ಳಿಯ ಮಹೇಶ್ವರಮ್ಮ ದೇವಸ್ಥಾನ ಹತ್ತಿರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ಕಣ್ಣು, ಕಿವಿ, ಮೂಗು, ಹೃದಯರೋಗ, ಆಯುರ್ವೇದ ಪರೀಕ್ಷೆ ಮತ್ತು ಸಲಹೆ, ಚಿಕ್ಕ ಮಕ್ಕಳಿಗೆ ಹೃದಯ ರೋಗದ ಚಿಕಿತ್ಸೆಗೆ ಆರ್ಥಿಕ ಸಹಾಯ, ಮಹಿಳೆಯರಿಗೆ ಗರ್ಭಕೋಶ, ಸ್ತನಕ್ಯಾನ್ಸರ್ ಹೊಡಿತಾ ಪರೀಕ್ಷೆ ಹಾಗೂ ಸಲಹೆ ಈ ಎಲ್ಲಾ ತರಹದ ಕಾಯಿಲೆಗಳಿಗೆ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಯಿತು.

ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಆದ್ಯ ಪೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಆದ್ಯ ಪೌಂಡೇಶನ್ ಕಿರಣ್ ಕುಮಾರ್, ಜೆಡಿಎಸ್ ಮುಖಂಡರಾದ ಚರಣ್ ಗೌಡ, ಬಿ ಎನ್ ಜಗದೀಶ್, ಕೃಷ್ಣಮೂರ್ತಿ, ಗುರುಪ್ರಸಾದ್, ವೆಂಕಟೇಶ್ ಬಾಬು,ರಾಜು, ಉಸೇನ್, ಜೆನ್ನಿಫರ್, ಮಮತ, ರುಬೀನಾ ಲಯನ್ಸ್ ಕ್ಲಬ್ ಪದಾಧಿಕಾರಿಗಳು, ನುರಿತ ವೈದ್ಯರ ತಂಡ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos