ಆಪತ್ತು ಬಂದಾಗ ದೇಶ ಸೇವೆಗೆ ಮುಂದಾಗಿ

ಆಪತ್ತು ಬಂದಾಗ ದೇಶ ಸೇವೆಗೆ ಮುಂದಾಗಿ

ಕುಣಿಗಲ್: ಬಂದೂಕು ತರಬೇತಿ ಪಡೆದ ನಾಗರಿಕರು ಸಮಾಜಕ್ಕೆ ನಿಜವಾದ ಆಸ್ತಿ. ದೇಶಕ್ಕೆ ಆಪತ್ತು ಬಂದಾಗ ದೇಶ ಸೇವೆಗೆ ಮುಂದಾಗಬೇಕು ಎಂದು ತಿಳಿಸಿದ ಕುಣಿಗಲ್ ಡಿವೈಎಸ್ಪಿ ಜಗದೀಶ್ ದುರ್ಬಳಕೆ ಮಾಡಿಕೊಂಡರೆ ಕಾನೂನು ನಿಮ್ಮನ್ನು ಶಿಕ್ಷಿಸುತ್ತದೆ ಎಂದು ಎಚ್ಚರಿಸಿದರು
ಪಟ್ಟಣದ ಮಹಾತ್ಮ ಗಾಂಧಿ ಮೈದಾನದಲ್ಲಿ ಎಂಬತ್ತು ನಾಗರಿಕರಿಗೆ ಏರ್ಪಡಿಸಿದ್ದ ಬಂದೂಕು ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು
ಬಂದೂಕು ತರಬೇತಿ ಸಮಯದಲ್ಲಿ ನಿಮ್ಮ ತರಬೇತಿದಾರರು ಹೇಳುವ ಸೂಚನೆಗಳಿಗೆ ತಕ್ಕಂತೆ ವಿಧೇಯತೆಯಿಂದ ಮಾರ್ಗಸೂಚಿಗಳನ್ನು ಕಲಿತಾಗ ತರಬೇತಿಯನ್ನು ಪರಿಪೂರ್ಣವಾಗಿ ಕಲಿಯಲು ಸಾಧ್ಯ ಅಂತಹ ಸೂಚನೆಗಳಿಗೆ ಸ್ಪಂದಿಸದಿದ್ದರೆ ತರಬೇತಿಯಿಂದ ನಿರ್ದಾಕ್ಷಿಣ್ಯವಾಗಿ ಹೊರ ಕಳಿಸುತ್ತೇವೆ ಎಂದು ಎಚ್ಚರಿಸಿದರು.
ತರಬೇತಿ ಸಮಯದಲ್ಲಿ ನಿಮಗೆ ಆರೋಗ್ಯ ಸಮಸ್ಯೆ ಸೇರಿದಂತೆ ವೈಯಕ್ತಿಕ ಸಮಸ್ಯೆಗಳು ಕಂಡು ಬಂದಾಗ ನಮಗೆ ತಿಳಿಸಬೇಕು ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಮತ್ತು ಮುಂದಿನ ತರಬೇತಿಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತೇವೆ ಎಂದರು ಈ ಸಂದರ್ಭದಲ್ಲಿ ಪಿಎಸ್‌ಐ ಶೆಟ್ಟಾಳಪ್ಪ ಸೇರಿದಂತೆ ಬಂದೂಕು ತರಬೇತಿದಾರರು ಹಾಗೂ ಶಿಬಿರಾರ್ಥಿಗಳು ಇದ್ದರು

ಫ್ರೆಶ್ ನ್ಯೂಸ್

Latest Posts

Featured Videos