ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಬ್ಯಾಡಗಿ, ಜು.27: ಸಾಲ ಬಾಧೆಯಿಂದ ಬೇಸತ್ತು ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಶನಿವಾರ ಜರುಗಿದೆ.
ನಾಗಪ್ಪ ಹನುಮಂತಪ್ಪ ನಾಯ್ಕರ (34) ಆತ್ಮಹ್ಯತೆ ಮಾಡಿಕೊಂಡ ರೈತ. ರೈತ ನಾಗಪ್ಪ 2 ಎಕರೆ 32 ಗುಂಟೆ ಜಮೀನು ಹೊಂದಿದ್ದು, ಸ್ಥಳೀಯ ಕೆವಿಜಿ ಬ್ಯಾಂಕ್ನಲ್ಲಿ 2.5 ಲಕ್ಷ ರೂ. ಹಾಗೂ ಬಡ್ಡಿಗಾರರ ಬಳಿ 2 ಲಕ್ಷ ರೂ. ಸಾಲ ಮಾಡಿದ್ದರು. ಮೂರು ವರ್ಷಗಳಿಂದ ಸತತ ಬೆಳೆ ನಷ್ಟದಿಂದ ಬೇಸತ್ತು ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos