ಮೈಸೂರು,ಜ. 9 : ಕಾಲಚಕ್ರ ಉರುಳುತ್ತಿದ್ದಂತೆ ಮತ್ತೆ ಪುರಾತನ ಕಾಲದ ಕೆಲವು ಆಹಾರ, ತಿನಿಸುಗಳು ಇಂದು ಅನಿವಾರ್ಯವಾಗುತ್ತಿದೆ
ಗೆಡ್ಡೆ ಗೆಣಸುಗಳಿಗೆ ವಿದೇಶ ಮಾರುಕಟ್ಟೆಯಲ್ಲಿ ವ್ಯಾಪಕ ಬೇಡಿಕೆ ವ್ಯಕ್ತವಾಗುತ್ತಿದ್ದು, ಮೈಸೂರಿನ ನಂಜರಾಜ ಛತ್ರದಲ್ಲಿ ಜನವರಿ 11 ಹಾಗೂ 12ರಂದು ಗಡ್ಡೆ ಗೆಣಸಿನ ಮೇಳ ಹಮ್ಮಿಕೊಳ್ಳಲಾಗಿದೆ.
ಇದಕ್ಕೆ ವಿವಿಧೆಡೆಗಳಿಂದ ವಿಜ್ಞಾನಿಗಳು, ಉದ್ಯಮಿಗಳು, ಕೃಷಿ ಸಂಶೋಧಕರು ಆಗಮಿಸಲಿದ್ದಾರೆ.
ಒಂದು ಕಾಲದಲ್ಲಿ ಕಾಡು ಮನುಷ್ಯರು ಹಾಗೂ ಪೂರ್ವಿಕರು ತಿನ್ನುತ್ತಿದ್ದ ಆಹಾರ ಎಂದು ಹೀಗಳೆಯುತ್ತಿದ್ದ ಗೆಡ್ಡೆ ಗೆಣಸಿಗೆ ಇದೀಗ ವಿದೇಶದಿಂದಲೂ ವ್ಯಾಪಕ ಬೇಡಿಕೆ ಬರುತ್ತಿದ್ದು, ಭಾರತದಲ್ಲಿನ ಈ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ವಿನೂತನ ಪ್ರಯತ್ನ ನಡೆಯುತ್ತಿದೆ.