ಲಕ್ನೋ, ಮಾ.22, ನ್ಯೂಸ್ ಎಕ್ಸ್ ಪ್ರೆಸ್: ಲಕ್ಕಿಪುರದ ಶಾಸಕ ಯೋಗಿಶ್ ವರ್ಮಾ ಜಿಲ್ಲಾ ಪಾರ್ಟಿ ಕಚೇರಿಯಲ್ಲಿ ಹೋಳಿ ಹಬ್ಬ ಆಚರಿಸುತ್ತಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ.
ಇದೇ ವೇಳೆ ಯೋಗಿಶ್ ವರ್ಮಾ ಹಾಗೂ ಕೆಲವು ಜನರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ವ್ಯಕ್ತಿಯೊಬ್ಬ ಯೋಗಿಶ್ ವರ್ಮಾ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬುಲೆಟ್ ಕಾಲಿಗೆ ಬಿದ್ದ ಪರಿಣಾಮ ಸಾವಿನ ದವಡೆಯಿಂದ ಯೋಗಿಶ್ ವರ್ಮಾ ಪಾರಾಗಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ಯುಪಿ ಪೊಲೀಸರು ಈ ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದರು.