ಮುಳುಗಿದ್ದ ಲಕ್ಷ್ಮೀನಾರಾಯಸ್ವಾಮಿ ದೇವಾಲಯ ಗೋಚರ.!

ಮುಳುಗಿದ್ದ ಲಕ್ಷ್ಮೀನಾರಾಯಸ್ವಾಮಿ ದೇವಾಲಯ ಗೋಚರ.!

ಮೈಸೂರು, ಮೇ.3, ನ್ಯೂಸ್ ಎಕ್ಸ್ ಪ್ರೆಸ್: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಹಿನ್ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದ ಪ್ರಸಿದ್ದ ದೇವಾಲಯ ವೇಣುಗೋಪಾಲ ಸ್ವಾಮಿ ದೇವಸ್ಥಾನ ಇದೀಗ ಗೋಚರವಾಗಿದೆ.

ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಬೇಸಿಗೆಯ ಕಾರಣದಿಂದಾಗಿ 86 ಅಡಿಗೆ ಕುಸಿದ ಕಾರಣದಿಂದಾಗಿ, ನೀರಿನಲ್ಲಿ ಮುಳುಗಿದ್ದ ಐತಿಹಾಸಿಕ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ ಇದೀಗ ಜನರಿಗೆ ಗೋಚರಿಸುವಂತಾಗಿದೆ.

ಐತಿಹಾಸಿಕ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ ಕೆಆರ್ ಹಿನ್ನೀರಿನ ಮಟ್ಟ ಕಡಿಮೆಯಾಗಿ ಕಾಣುತ್ತಿರುವುದರಿಂದಾಗಿ, ಈ ದೇವಾಲಯವನ್ನು ನೋಡಲು ತಂಡೋಪ ತಂಡವಾಗಿ, ಜನರು ಆಗಮಿಸುತ್ತಿದ್ದಾರೆ. ಅಲ್ಲದೇ ಕೆಆರ್ ಎಸ್ ನಲ್ಲಿನ ಕಾರಂಜಿ, ಬೃಂದಾವನ ನೋಡಲು ಬಂದ ಪ್ರವಾಸಿಗರು ಕೂಡ ಹಿನ್ನೀರಿಗೆ ತೆರಳಿ, ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನವನ್ನು ನೋಡಿ ಕಣ್ ತುಂಬಿಕೊಂಡು ಬರುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos