ಚಿತ್ರ ನಿರ್ಮಾಪಕಿ ಜಯಶ್ರೀ ದೇವಿ ವಿಧಿವಶ

ಚಿತ್ರ ನಿರ್ಮಾಪಕಿ ಜಯಶ್ರೀ ದೇವಿ ವಿಧಿವಶ

ಹೈದರಾಬಾದ್: ಖ್ಯಾತ ನಿರ್ಮಾಪಕಿ ಜಯಶ್ರೀ ದೇವಿ (60) ಇಂದು ಬೆಳಗ್ಗೆ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬಹಳಷ್ಟು ಚಿತ್ರಗಳನ್ನು ನಿರ್ಮಿಸಿದ್ದ ಜಯಶ್ರೀ ದೇವಿ ತೆಲುಗು ಮೂಲದವರಾಗಿದ್ದು, ಕನ್ನಡದಲ್ಲಿ ಭವಾನಿ, ನಮ್ಮೂರ ಮಂದಾರ ಹೂವೆ, ಶ್ರೀ ಮಂಜುನಾಥ, ನಿಶ್ಯಬ್ದ, ಕೋಣ ಈದೈತೆ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದರು.

ಕನ್ನಡದಲ್ಲಿ ಕೊನೆಯದಾಗಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ನಟನೆಯ ಮುಕ್ಕುಂದ ಮುರಾರಿ ಚಿತ್ರಕ್ಕೆ ಜಯಶ್ರೀ ದೇವಿ ಕಾರ್ಯಾಕಾರಿ ನಿರ್ಮಾಪಕಿ ಕೂಡ ಆಗಿದ್ದರು. ಇತ್ತೀಚಿಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಜಯಶ್ರೀ ದೇವಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos