ಮೇಲ್ಸೇತುವೆಯಿಂದ ಜಿಗಿದು ವ್ಯಕ್ತಿ ಸಾವು

ಮೇಲ್ಸೇತುವೆಯಿಂದ ಜಿಗಿದು ವ್ಯಕ್ತಿ ಸಾವು

ಬೆಂಗಳೂರುಮೇ. 11,ನ್ಯೂಸ್ ಎಕ್ಸ್ ಪ್ರೆಸ್ಒಂದು ತಿಂಗಳ ಮಗುವಿನ ಸಾವಿನ ದುಃಖಸಹಿಸಲಾಗದೆ ತಂದೆ  ನೆಲಮಂಗಲ ಮೇಲ್ಸೇತುವೆಯಿಂದ ಜಿಗಿದು  ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಮುಂಜಾನೆ ನಡೆದಿದೆ.

ಕಾಮಾಕ್ಷಿಪಾಳ್ಯದ ನಿವಾಸಿ ನರಸಿಂಹ ಮೂರ್ತಿ (28) ಎಂದು ಗುರುತಿಸಲಾಗಿದೆ. ಮೂಲತಃ ಆಂಧ್ರ ಪ್ರದೇಶದ ಅನಂತಪುರದವನಾದ ಈತ ಶುಕ್ರವಾರ ಮುಂಜಾನೆ ನೆಲಮಂಗಲ ಎಕ್ಸಪ್ರೆಸ್- ವೇ ಮೇಲೆ ಅರ್ಧ ಕೀಲೋಮೀಟರ್ ನಡೆದು ಬಳಿಕ ಕೆಳಕ್ಕೆ ಹಾರಿದ್ದಾನೆ.  ಕೆಳಕ್ಕೆ ಬಿದ್ದ ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತಲೆಗೆ ಗಂಭೀರವಾದ ಗಾಯವಾಗಿದ್ದರಿಂದ ಅರ್ಧ ದಾರಿಯಲ್ಲಿಯೇ ಸಾವನ್ನಪ್ಪಿದ್ದಾನೆ. ಕುಟುಂಬ ಮಾಹಿತಿ ಪ್ರಕಾರ ಮೂರ್ತಿಯ ಮಗು ಕೆಲ ದಿನಗಳ ಹಿಂದೆ ಅನಂತಪುರದಲ್ಲಿ ಸಾವನ್ನಪ್ಪಿತ್ತು. 6 ವರ್ಷದ ಹಿಂದೆ ಮದುವೆಯಾಗಿದ್ದ ಈತನಿಗೆ 3 ವರ್ಷದ ಹೆಣ್ಣು ಮಗುವಿದೆ ಕುಟುಂಬ ಮೂಲ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos