ಬೆಂಗಳೂರು: ಮಾಜಿ
ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನಕ್ಕೆ ಉಪಮುಖ್ಯಮಂತ್ರಿ
ಡಾ.ಜಿ. ಪರಮೇಶ್ವರ
ಸಂತಾಪ ಸೂಚಿಸಿದ್ದಾರೆ.
ಮಾಜಿ ರಕ್ಷಣಾ ಸಚಿವರು, ಕನ್ನಡಿಗರೇ ಆದ ಜಾರ್ಜ್ ಫರ್ನಾಂಡಿಸ್ ಅವರ ನಿಧನವು ಅತ್ಯಂತ ನೋವು ತರಿಸಿದೆ ಎಂದಿದ್ದಾರೆ.
ವಾಜಪೇಯಿ ಅವರ ಕೇಂದ್ರ ಸಚಿವ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದರು, ಕಾರ್ಮಿಕರ ಪರ ಹೋರಾಟ ಮಾಡಿದವರು. ರಾಜ್ಯದಲ್ಲಿ ಹುಟ್ಟಿದರೂ ಮುಂಬೈನಲ್ಲಿ ರಾಜಕೀಯ ಜೀವನ ರೂಪಿಸಿಕೊಂಡು ಕಾರ್ಮಿಕರು ಮತ್ತು ಶೋಷಿತರ ನಿಜವಾದ ಧ್ವನಿಯಾಗಿದ್ದರು. ಇವರ ಆತ್ಮಕ್ಕೆ ಶಾಂತಿ ಸಿಗಲಿ. ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಇವರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುವೆ ಎಂದು ಕಂಬನಿ ಮಿಡಿದ್ದಾರೆ.