ಸಿಬ್ಬಂದಿ ವಿರುದ್ಧ ರೈತರ ಪ್ರತಿಭಟನೆ

ಸಿಬ್ಬಂದಿ ವಿರುದ್ಧ ರೈತರ ಪ್ರತಿಭಟನೆ

ಪಾವಗಡ: ಪಟ್ಟಣದಲ್ಲಿ ತಾಲ್ಲೂಕು ರೈತ ಸಂಘ ಅಧ್ಯಕ್ಷ ನರಸಿಂಹ ರೆಡ್ಡಿ ಅವರ ನೇತೃತ್ವದಲ್ಲಿ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬಲವಂತ ಸಾಲ ವಸೂಲಿ ಕ್ರಮ ಬ್ಯಾಂಕಿನ ಸಿಬ್ಬಂದಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ರೈತ ಮಹಿಳೆಯರು ಎಂಬ ಭೇದವಿಲ್ಲದೆ ಒಂದೇ ರೀತಿ ವರ್ತಿಸುತ್ತಿದ್ದು ಯಾವುದೇ ರೈತರಿಗೆ ಬ್ಯಾಂಕ್ ಅಧಿಕಾರಿಗಳು ಮರ್ಯಾದೆ ಕೊಡದೆ ರೈತರನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ.
ಆರು ತಿಂಗಳಿನಿಂದ ಸಾಲಮನ್ನಾದ ಮತ್ತು ಒ.ಟಿ. ಎಸ್ ಮಾಡಿದ ರೈತರ ದಾಖಲಾತಿಗಳು ಸರಿ ಇಲ್ಲ ಎಂಬ ನೆಪವೊಡ್ಡಿ ಸಾಲ ಮನ್ನಾ ಮಾಡದೇ ಬ್ಯಾಂಕ್ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಪ್ರತ್ಯೇಕ ಬ್ಯಾಂಕ್ ತೆರೆಯಬೇಕು ಎಂದು ಹೇಳಿದರು
ತುಮಕೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಚೀಫ್ ಮ್ಯಾನೇಜರ್ ನಾಗೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿತಾಲೂಕು ರೈತ ಸಂಘದ ವೇಣು ವೀರ ಕ್ಯಾತಪ್ಪ ಅಂಜನಪ್ಪ ಶ್ರೀನಿವಾಸ ರೆಡ್ಡಿ ನಾಗರಾಜು ಹನುಮಂತರೆಡ್ಡಿ ಈರಣ್ಣ ಹನುಮಪ್ಪ ಗಿರಿಯಮ್ಮ . ತಿಮ್ಮಯ್ಯ ಗೋವಿಂದಪ್ಪ ಹನುಮಂತಪ್ಪ ಇನ್ನೂ ನೂರಾರು ರೈತ ಸಂಘದ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos