ಇದಕ್ಕಾಗಿ ತನ್ವೀರ್ ಸೇಠ್ ಕೊಲೆಗೆ ಯತ್ನ ಮಾಡಿದ್ದನಂತೆ ಫರಾನ್

ಇದಕ್ಕಾಗಿ ತನ್ವೀರ್ ಸೇಠ್ ಕೊಲೆಗೆ ಯತ್ನ ಮಾಡಿದ್ದನಂತೆ ಫರಾನ್

ಮೈಸೂರು, ನ. 19: ಮೊನ್ನೆ ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದ. ತಕ್ಷಣವೇ ಈ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು. ಕೊಲೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಫರಾನ್ ಎಂದು ಗುರುತಿಸಲಾಗಿದ್ದು, ಫರಾನ್ ಇದೀಗ ಪೊಲೀಸರ ವಶದಲ್ಲಿದ್ದಾನೆ.

ಫರಾನ್, ತನ್ವೀರ್ ಮೇಲೆ ಹಲ್ಲೆ ಮಾಡಿದ್ದು ಹೆಸರು ಮಾಡಲು ಎಂಬ ಅಚ್ಚರಿಯ ವಿಚಾರ ಫರಾನ್ ಸ್ನೇಹಿತರಿಂದ ಗೊತ್ತಾಗಿದೆ ಎಂದು ಹೇಳಲಾಗಿದೆ. ಗಣ್ಯರನ್ನು ಕೊಲೆ ಮಾಡಿ ಹೆಸರು ಮಾಡಬೇಕೆಂಬ ಗೀಳಿನಿಂದ ತನ್ವೀರ್ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಈ ಹಿಂದೆ ಫರಾನ್ ಕೂಡ ಸ್ನೇಹಿತರ ಜೊತೆ ಮಾತನಾಡುವಾಗ ಈ ವಿಚಾರ ಪ್ರಸ್ತಾಪ ಮಾಡಿದ್ದನಂತೆ. ಗಣ್ಯ ವ್ಯಕ್ತಿಗಳನ್ನು ಕೊಲೆ ಮಾಡಿ ಹೆಸರು ಮಾಡಬೇಕು ಎಂದಿದ್ದನಂತೆ. ಹೀಗಂತ ಫರಾನ್ ಸ್ನೇಹಿತರು ಪೊಲೀಸರ ಮುಂದೆ ಹೇಳಿದ್ದಾರೆ. ಆದರೆ ತನ್ವೀರ್ ಕೊಲೆ ಯತ್ನ ಯಾಕೆ ಮಾಡಿದೆ ಅಂತಾ ಫರಾನ್ ಇನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿಲ್ಲವೆನ್ನಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos