ಬೀದರ,ಜೂ.26 : ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 6 ಮಂದಿ ದಾರುಣ ಸಾವನ್ನಪ್ಪಿದ ಭೀಕರ ದುರಂತ ಬಸವಕಲ್ಯಾಣದ ಚಿಲ್ಲಾಗಲ್ಲಿಯಲ್ಲಿ ನಡೆದಿದೆ. ಮೃತ ದುರ್ದೈವಿಗಳು ನದೀಮ್ ಶೇಖ್ (45 ) ಫರಿದಾ ಬಾನು ,ಆಯಿಷಾ ಬಾನು (15 ),ಮೆಹಾತಾಬಿ(14), ಫೈಜಾನ್ ಅಲಿ (6),ಫರಾನ್ ಅಲಿ (4) ಎನ್ನುವವರಾಗಿದ್ದಾರೆ.
ನೂರು ವರ್ಷಕ್ಕೂ ಹಳೆಯದಾದ ಮನೆಯ ಗೋಡೆಗಳು ಮಳೆಯಿಂದಲಾಗಿ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಮನೆಯ ಛಾವಣಿ ಮತ್ತು ಗೋಡೆ ಕುಸಿದು ಬಿದ್ದ ಪರಿಣಾಮ ಮಲಗಿದ್ದ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬಸವಕಲ್ಯಾಣ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.