ಮುಖದ ಮೇಲೆ ಸ್ವಾತಂತ್ರ್ಯ ಹೋರಾಟಗಾರರು!

ಮುಖದ ಮೇಲೆ ಸ್ವಾತಂತ್ರ್ಯ ಹೋರಾಟಗಾರರು!

ಬೆಂಗಳೂರು, ಆ. 15: ಇಂದು ದೇಶದಾದ್ಯಂತ ಸಡಗರ, ಸಂಭ್ರಮದಿಂದ 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ ಕೆಲವೆಡೆ ಸುರಿಯುವ ಮಳೆಯಲ್ಲೂ ಧ್ವಜಾರೋಹಣ ನೆರವೇರಿಸಲಾಗಿದೆ.

ಹೌದು, ಇದರ ಮಧ್ಯೆ ಚಿತ್ರ ಕಲಾವಿದರೊಬ್ಬರು ತಮ್ಮಿಬ್ಬರು ಪುತ್ರಿಯರ ಮುಖದ ಮೇಲೆ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ಚಿತ್ರ ಬಿಡಿಸಿದ್ದು, ಎಲ್ಲರ ಗಮನ ಸೆಳೆದಿದೆ.

ಬೆಂಗಳೂರಿನ ಲಿಂಗರಾಜಪುರದ ಜ್ಯೋತಿ ಶಾಲೆಯ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಕುಂಬಾರ ಹಾಗೂ ಚಾರ್ಲ್ಸ್ ಶಾಲೆಯ ವಿದ್ಯಾರ್ಥಿನಿ ಪಲ್ಲವಿ ಕುಂಬಾರ ಎಂಬ ಬಾಲಕಿಯರ ಮುಖದ ಮೇಲೆ ಅವರ ತಂದೆ ಎಲ್ಲಪ್ಪ ಕಂಬಾರ ಚಿತ್ರ ಮೂಡಿಸಿದ್ದಾರೆ.

ಎಲ್ಲಪ್ಪ ಕಂಬಾರ ಅವರ ಕೈ ಚಳಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ್ ತಿಲಕ್ ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರ ಛಾಯಾಚಿತ್ರ ಅರಳಿದ್ದು, ಕಬ್ಬನ್ ಪಾರ್ಕ್ ಆವರಣದಲ್ಲಿ ಈ ಮಕ್ಕಳು ಎಲ್ಲರ ಗಮನ ಸೆಳೆದರು.

 

ಫ್ರೆಶ್ ನ್ಯೂಸ್

Latest Posts

Featured Videos