ಕಣ್ಣು ಮುಚ್ಚಿ ಕುಳಿತ ಸರ್ಕಾರ!

ಕಣ್ಣು ಮುಚ್ಚಿ ಕುಳಿತ ಸರ್ಕಾರ!

ಬೆಳಗಾವಿ, ಜ.8 : ಬೆಳಗಾವಿ ಜಿಲ್ಲೆ ಪ್ರವಾಹ ಹಾಗೂ ಮಹಾಮಳೆಗೆ ಸಿಕ್ಕು 5 ತಿಂಗಳು ಕಳೆದಿದೆ. ಇನ್ನೂ ಅದೆಷ್ಟೊ ಕುಟುಂಬಗಳು ಬೀದಿಯಲ್ಲಿ ಜೀವನ ನಡೆಸುತ್ತಿವೆ. ಬಿದ್ದ ಮನೆಯಲ್ಲಿ ಬಾಣಂತಿಯೊಬ್ಬರು ಕಳೆದ 5 ತಿಂಗಳಿಂದ ವಾಸಿಸುತ್ತಿದ್ದಾರೆ. ಜಿಲ್ಲಾಡಳಿತ ಅನೇಕ ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಿದೆ. ಆದರೇ ಇನ್ನೂ ಅನೇಕ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ.

ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೊಲಾರಕೊಪ್ಪ ಗ್ರಾಮದಲ್ಲಿ ಬಾಂಣತಿಗೆ ಇರೋಕೆ ಮನೆ ಇಲ್ಲ ಹೀಗಾಗಿ ಬಿದ್ದ ಮನೆಯಲ್ಲಿಯೇ ಜೀವ ನಡೆಸುತ್ತಿದ್ದಾರೆ. ಕಳೆದ ಆಗಷ್ಟ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಚಂದ್ರ್ಪ ನಾಗಪ್ಪ ಕಂಬಾರ ಎಂಬುವರ ಬಿದ್ದಿತ್ತು. ಮನೆಯ ಗೋಡೆ ಮಾತ್ರ ಬಿದ್ದಿದೆ ಎಂದು ಸರ್ಕಾರ ಕೇವಲ 25 ಸಾವಿರ ರೂಪಾಯಿ ಪರಿಹಾರ ವಿತರಣೆ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos