ಬಿಂದು ಕಣ್ಣಿಗೆ ಖಾರದಪುಡಿ ಎರಚಿದ ಭಕ್ತರು

ಬಿಂದು ಕಣ್ಣಿಗೆ ಖಾರದಪುಡಿ ಎರಚಿದ ಭಕ್ತರು

ತಿರುವನಂತಪುರ, ನ.26 : ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಲು ಮುಂದಾದ ಬಿಂದು ಅಮ್ಮಿಣಿ ಮೇಲೆ ಸೋಮವಾರ ಅಯ್ಯಪ್ಪನ ಭಕ್ತರು ಖಾರದಪುಡಿ ಎರಚಿದ್ದಾರೆ. ಬಿಂದು ದೇವಾಲಯ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದರು. ಮಹಿಳಾ ಹಕ್ಕುಗಳ ರಕ್ಷಣಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಜೊತೆ ಬಿಂದು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬೆನ್ನಲ್ಲೇ ಅಯ್ಯಪ್ಪನ ಭಕ್ತರು ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಬಿಂದು ಕಣ್ಣಿಗೆ ಕೆಲವರು ಖಾರದಪುಡಿ ಎರಚಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಐದು ಮಹಿಳೆಯರ ಜೊತೆ ಬಿಂದು ಹಾಗೂ ತೃಪ್ತಿ ಇಂದು ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಭದ್ರತೆ ನೀಡುವಂತೆ ಕೋರಿದ್ದಾರೆ. ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರಿಗೆ ಭದ್ರತೆ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos