ಇಂದಾದರೂ ಜೈಲಿನಿಂದ ವಿಮುಕ್ತಿ  ಸಿಗುಯತ್ತಾ ಡಿಕೆಶಿಗೆ?

ಇಂದಾದರೂ ಜೈಲಿನಿಂದ ವಿಮುಕ್ತಿ  ಸಿಗುಯತ್ತಾ ಡಿಕೆಶಿಗೆ?

ನವದೆಹಲಿ, ಸೆ. 25: ಇಂದು ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಯ ಇಂದು ತೀರ್ಪು ಪ್ರಕಟವಾಗಲಿದೆ.

ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ ಇಡಿ ಮತ್ತು ಡಿಕೆಶಿ ವಾದ ಪ್ರತಿವಾದಗಳು ಮುಕ್ತಾಯಗೊಂಡಿವೆ. ನ್ಯಾ. ಅಜಯ್ ಕುಮಾರ್ ಕುಹರ್ ಅವರು ಸೆ.21ರಂದು ತೀರ್ಪನ್ನು ಸೆ. 25ಕ್ಕೆ ಕಾಯ್ದಿರಿಸಿದ್ದರು. ಅದರಂತೆ ಇಂದು ಮಧ್ಯಾಹ್ನ 3:30ಕ್ಕೆ ತೀರ್ಪು ಪ್ರಕಟವಾಗಲಿದೆ.

ಒಂದು ವೇಳೆ ಇಂದು ಕೂಡ ಡಿಕೆಶಿಗೆ ಜಾಮೀನು ಸಿಗದಿದ್ದರೆ ಮುಂದೆ ದೆಹಲಿ ಹೈಕೋರ್ಟಿಗೆ ಹೋಗಿ ಜಾಮೀನು ಪಡೆಯಬೇಕು. ಅಥವಾ ಅ. 1ರಂದು ಜೆಸಿ ಅವಧಿ ಮುಗಿದ ಬಳಿಕ ಮತ್ತೆ ಇಡಿ ಕೋರ್ಟಿಗೆ ಬರಬೇಕು ಎಂದು ತಿಳಿದು ಬಂದಿದೆ.

 

ಫ್ರೆಶ್ ನ್ಯೂಸ್

Latest Posts

Featured Videos