ಎತ್ತಿನ ಗಾಡಿಗೆ ಬಸ್ ಡಿಕ್ಕಿ

ಎತ್ತಿನ ಗಾಡಿಗೆ ಬಸ್ ಡಿಕ್ಕಿ

ಕೆ.ಎಂ.ದೊಡ್ಡಿ, ಅ.14 : ಕೆಎಸ್ಆರ್ಟಿಸಿ ಬಸ್ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಹಿನ್ನಲೆ ಗಾಡಿ ಜಖಂಗೊಂಡು ಎತ್ತು ತೀವ್ರವಾಗಿ ಗಾಯಗೊಂಡಿರುವ ಘಟನೆ ವಿಜಯ ಬ್ಯಾಂಕ್ ಸರ್ಕಲ್ನಲ್ಲಿ ನಡೆದಿದೆ.
ಯಡಗನಹಳ್ಳಿ ಗ್ರಾಮದ ರೈತ ಆನಂದ್ ಎಂಬುವವರ ಎತ್ತಿನ ಗಾಡಿ ಜಖಂಗೊಂಡಿದ್ದು ಎತ್ತಿನ ಎಡಗಾಲಿನ ಮೂಳೆ ಮತ್ತು ಕೊಂಬಿಗೆ ತೀವ್ರ ಗಾಯಗೊಂಡಿದೆ. ಚಾಂಶುಗರ್ಸ್ ಕಾರ್ಖಾನೆಗೆ ರೈತ ಆನಂದ್ ಎತ್ತಿನ ಗಾಡಿಯಲ್ಲಿ ಕಬ್ಬು ತುಂಬಿಕೊಂಡು ಬರುತ್ತಿದ್ದಾಗ ಕೆಎಸ್ಆರ್ಟಿಸಿ ಡಿಕ್ಕಿಹೊಡೆದಿದ್ದರಿಂದ ಗಾಡಿ ಜಖಂಗೊಂಡು ಎತ್ತಿಗೆ ತೀವ್ರ ಪೆಟ್ಟುಬಿದ್ದಿದೆ.
ಇದರಿಂದ ಕುಪಿತಗೊಂಡ ರೈತ ಸ್ಥಳದಲ್ಲೇ ಗಾಡಿ ಬಿಟ್ಟು ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದು ಮಾರ್ಗದಲ್ಲಿ ಬರುತಿದ್ದಕ್ಕೂ 10 ಹೆಚ್ಚು ಎತ್ತಿನ ಗಾಡಿಗಳನ್ನು ರೈತರು ರಸ್ತೆಯಲ್ಲೇ ನಿಲ್ಲಿಸಿ ಹೋರಾಟಕ್ಕೆ ಸಾಥ್ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos