ಕಳಪೆ ಕಾಮಗಾರಿ ಪ್ರಶ್ನಿಸಿದ ಗ್ರಾಮಸ್ಥರು, ಇಂಜಿನಿಯರ್ ಎಸ್ಕೇಪ್!

ಕಳಪೆ ಕಾಮಗಾರಿ ಪ್ರಶ್ನಿಸಿದ ಗ್ರಾಮಸ್ಥರು, ಇಂಜಿನಿಯರ್ ಎಸ್ಕೇಪ್!

ಬೆಂಗಳೂರು, ಏ. 29, ನ್ಯೂಸ್ ಎಕ್ಸ್ ಪ್ರೆಸ್:   ಮಾಗಡಿಯ ಕುದೂರಿನ ಮಲ್ಲಿಗುಂಟೆಯ ಕಾಲೋನಿಯಲ್ಲಿ ಎಸ್‍ಇಪಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕಾಮಗಾರಿಯ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಿದಾಗ ಅಲ್ಲಿಂದ ಎಂಜಿನಿಯರ್​ ಕಾಲ್ಕಿತ್ತಿದ್ದಾನೆ. ಸ್ಥಳೀಯ ಶಾಸಕರು ಮಲ್ಲಿಗುಂಟೆ ಗ್ರಾಮಕ್ಕಾಗಮಿಸಿದಾಗ ಇಲ್ಲಿನ ಚರಂಡಿ ಅವ್ಯವಸ್ಥೆಯ ಬಗ್ಗೆ ಗ್ರಾಮಸ್ಥರು ಹೇಳಿದ್ದರು. ಶಾಸಕ ಎ.ಮಂಜುನಾಥ್ ಮೊದಲಿಗೆ ಚರಂಡಿ ವ್ಯವಸ್ಥೆ ಸರಿ ಮಾಡಿ ನಂತರ ರಸ್ತೆ ಕಾಮಗಾರಿಗೆ ಕೈ ಹಾಕುವಂತೆ ಗ್ರಾಮಸ್ಥರ ಸಮ್ಮುಖದಲ್ಲಿ ಸೂಚಿಸಿದ್ದರು. ಅದರೆ ಎಂಜಿನಿಯರ್​ ಮತ್ತು ಗುತ್ತಿಗೆದಾರರು ಉಪಯೋಗವಿಲ್ಲದ ಕಡೆ ಕಾಂಕ್ರೀಟ್​ ಚರಂಡಿ ನಿರ್ಮಿಸಿದ್ದಾರೆ. ಜೊತೆಗೆ ರಸ್ತೆಗೆ ಮಣ್ಣು ಮಿಶ್ರಿತ ಸಿಮೆಂಟ್ ಕಾಂಕ್ರೀಟ್​ ಹಾಕುತ್ತಿದ್ದಾರೆ. ಅವ್ಯವಸ್ಥೆಯಿಂದಿರುವ ಚರಂಡಿಯನ್ನು ಸರಿ ಮಾಡದೆ ಮತ್ತು ಕಳೆಪೆ ಕಾಂಕ್ರೀಟ್​ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರಶ್ನಿಸಲು ಮುಂದಾದ್ರೆ ಕಾಂಟ್ರಾಕ್ಟರ್ ಸಾಗರ್ ಹಾಗೂ ಎಂಜಿನಿಯರ್​ ರಾಜಣ್ಣ ಗ್ರಾಮಸ್ಥರಿಗೆ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಯಾವಾಗ ಗ್ರಾಮಸ್ಥರು ಅಧಿಕಾರಿ ಮತ್ತು ಗುತ್ತಿಗೆದಾರನ ವಿರುದ್ಧ ತಮ್ಮ ಅಕ್ರೋಶ ಹೊರ ಹಾಕಿದರೋ ಆಗ ಎಂಜಿನಿಯರ್​ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಜನರಿಗೆ ಅನುಕೂಲವಾಗುವಂತಹ ಕಾಮಗಾರಿ ಮಾಡುವ ಬದಲು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೇವಲ ದುಡ್ಡು ಹೊಡೆಯುವ ಕಾರಣಕ್ಕಾಗಿಯೇ ಕಳಪೆ ಕಾಮಾಗಾರಿ ನಡೆಸುತ್ತಿದ್ದಾರೆನ್ನುವುದು ಗ್ರಾಮಸ್ಥರ ಆರೋಪ.

ಫ್ರೆಶ್ ನ್ಯೂಸ್

Latest Posts

Featured Videos