ಮೈಸೂರು, ಅ. 30 : ಕಂಪನಿಯಲ್ಲಿ ಕಳ್ಳತನ್ನವಾಗಿರುವ ಹಿನ್ನಲೆ ನೌಕರನೊಬ್ಬ ತನ್ನನ್ನೇ ವಿಚಾರಣೆಗೊಳಪಡಿಸಬಹುದೆಂದು ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುಟಗಳ್ಳಿಯ ಸ್ವೆಟ್ರ ಪೈಪ್ ಕಂಪನಿಯ ಹರೀಶ್(42) ಆತ್ಮಹತ್ಯೆ ಮಾಡಿಕೊಂಡಿರುವ ನೌಕರ.
ಸ್ಪೆಟ್ರ ಕಂಪನಿಯಲ್ಲಿ ಇತ್ತೀಚೆಗೆ ಕಳ್ಳತನ ನಡೆದಿತ್ತು. ಈ ಬಗ್ಗೆ ಹರೀಶ್ ಅವರೇ ಮೇಟಗಳ್ಳಿ ಪೊಲೀಸ್ಠಾಣೆಗೆ ದೂರು ನೀಡಿದ್ದರು. ಕಂಪನಿಯಲ್ಲಿ ವಸ್ತುಗಳು ಕಳುವಾಗಿರುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಾರೆ ಎಂದು ಹರೀಶ್ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದು, ಆದರೆ ಕಂಪನಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಹರೀಶ್ ಡೈರಿಯಲ್ಲಿ ಬರೆದಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.