ಆನೆಗಳಿಗೆ ಹೆದರಿ ಮರವೇರಿದ ಅಪ್ಪ- ಮಗ

ಆನೆಗಳಿಗೆ ಹೆದರಿ ಮರವೇರಿದ ಅಪ್ಪ- ಮಗ

ಒಡಿಶಾ, ಆ.14 : ಆನೆಗಳಿಗೆ ಹೆದರಿ ಅಪ್ಪ-ಮಗ ಮರವೇರಿ,ಕೂಳ್ಳಿತುಕೊಂಡಿರುವ ಘಟನೆ ಒಡಿಶಾದ ಕೆಯೋಂಜಾರ್ ಜಿಲ್ಲೆಯಲ್ಲಿ ನಡೆದಿದೆ.
ಕೆಯೋಂಜಾರ್ ಜಿಲ್ಲೆ ದೊಡ್ಡ ಸಂಖ್ಯೆಯ ಕಾಡಾನೆಗಳಿಗೆ ಪ್ರಖ್ಯಾತಿ ಪಡೆದಿದ್ದು, ಆಗಾಗ ಬೆಳೆಗಳನ್ನು ನಾಶಪಡಿಸುತ್ತವೆ. ಮನೆಗಳನ್ನೂ ನಾಶ ಮಾಡುತ್ತವೆ. ಆನೆಗಳ ಹಾವಳಿ ತಡೆಗಟ್ಟಲೆಂದು, ಕಾಡು ಪ್ರಾಣಿಗಳ 15 ತಜ್ಞರ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಆದರೂ ಆನೆಗಳ ಕಾಟ ತಪ್ಪಿದ್ದಲ್ಲ. ಹಾಗಾಗಿ, ಇಲ್ಲಿನ ಕುಸುಮಿತಾ ಗ್ರಾಮದ ಸುದ್ಯಾ ಮಹಾಕುಂದ್ ಮತ್ತವನ ಪುತ್ರ ಮರದ ಮೇಲೆ ಮನೆ ಮಾಡಿಕೊಂಡು ಜೀವಿಸುತ್ತಿದ್ದಾರೆ. ಆನೆಗಳ ದಾಳಿಯಿಂದ ತಮ್ಮ ಮನೆ ಕುಸಿದು ಬಿದ್ದ ಬಳಿಕ ಅಪ್ಪ-ಮಗ ಈ ವ್ಯವಸ್ಥೆ ಮಾಡಿಕೊಂಡಿದೆ

ಫ್ರೆಶ್ ನ್ಯೂಸ್

Latest Posts

Featured Videos